Latest

ಸಿದ್ದರಾಮಯ್ಯ ದಿಢೀರ್‌ ವಾಪಸ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

5 ದಿನಗಳ ವಿದೇಶ ಪ್ರವಾಸಕ್ಕೆ ತೆರಳಿದ್ದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರವಾಸ ಮೊಟಕುಗೊಳಿಸಿ ದಿಢೀರ್ ವಾಪಸ್ಸಾಗುತ್ತಿದ್ದಾರೆ.

ಬುಧವಾರ ರಾತ್ರಿಯೇ ಅವರು ಸಿಂಗಾಪುರದಿಂದ ಬೆಂಗಳೂರಿಗೆ ಬರಲಿದ್ದು, ಗುರುವಾರ ಇಲ್ಲವೆ ಶುಕ್ರವಾರ ಬೆಳಗಾವಿ ಅಧಿವೇಶನದಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

ಪಂಚರಾಜ್ಯ ಚುನಾವಣೆ ಫಲಿತಾಂಶದಿಂದ ಹೈಕಮಾಂಡ್ ಮಟ್ಟದಲ್ಲಿ ಕಡಿಮೆಯಾಗಬಹುದಾದ ತಮ್ಮ ಮಹತ್ವ ಉಳಿಸಿಕೊಳ್ಳಲು ಮತ್ತು ರಾಜ್ಯ ರಾಜಕಾರಣದಲ್ಲಿ ಉಂಟಾಗಿರುವ ಸ್ಫೋಟಕ ಸ್ಥಿತಿಯ ಹಿನ್ನೆಲೆಯಲ್ಲಿ ಅವರು ಪ್ರವಾಸ ಮೊಟಕುಗೊಳಿಸಿದ್ದಾರೆನ್ನಲಾಗುತ್ತಿದೆ.

Home add -Advt

ಒಟ್ಟರೆ ರಾಜ್ಯರಾಜಕೀಯ ಬೆಳಗಾವಿ ಅಧಿವೇಶನದ ಉಳಿದ ದಿನಗಳಲ್ಲಿ ಏನೂ ಆಗಬಹುದೆನ್ನುವ ಮುನ್ಸೂಚನೆ ಇದು ಎನ್ನಲಾಗುತ್ತಿದೆ.

Related Articles

Back to top button