Latest

ಬಿಜೆಪಿಯಿಂದ ಪ್ರತಿ ಕ್ಷೇತ್ರಕ್ಕೆ 2 ಎಲ್ಇಡಿ ಪ್ರಚಾರ ವಾಹನ

 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಪ್ರತಿ ಕ್ಷೇತ್ರಕ್ಕೆ 2ರಂತೆ ಬಿಜೆಪಿ ಸಿದ್ದಪಡಿಸಿರುವ ಎಲ್ಇಡಿ ಪ್ರಚಾರ ವಾಹನಗಳಿಗೆ ಬೆಂಗಳೂರಿನಲ್ಲಿ ಇಂದು ಚಾಲನೆ ನೀಡಲಾಯಿತು. 

ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್, ಮಾಜಿ ಉಪಮುಖ್ಯಮಂತ್ರಿ  ಆರ್.ಅಶೋಕ್ , ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ  ಸಿ.ಟಿ.ರವಿ ಎಲ್.ಇ.ಡಿ ಪ್ರಚಾರ ವಾಹನಗಳಿಗೆ ಪಕ್ಷದ ಬಾವುಟ ಹಾರಿಸುವ ಮೂಲಕ ಚಾಲನೆ ನೀಡಿದರು.

Home add -Advt

 ಆರ್.ಅಶೋಕ್  ಮಾತನಾಡಿ, ಪ್ರತಿ ಕ್ಷೇತ್ರಕ್ಕೆ ಎರಡು ಎಲ್.ಇ.ಡಿ ಪ್ರಚಾರ ವಾಹನಗಳು ಚಾಲನೆಯಲ್ಲಿರುತ್ತವೆ. ಈ ವಾಹನಗಳ ಮೂಲಕ ನರೇಂದ್ರ ಮೋದಿ ಮಾಡಿರುವ ಐದು ವರ್ಷಗಳ ಯೋಜನೆ ಮತ್ತು ಸಾಧನೆಗಳನ್ನು ಒಳಗೊಂಡ ಕನ್ನಡ ಮತ್ತು ಇಂಗ್ಲಿಷ್ ವಿಡಿಯೋಗಳನ್ನು ಪ್ರಚಾರ ಮಾಡಲಿದ್ದೇವೆ ಎಂದು  ತಿಳಿಸಿದರು.

ಸಿ.ಟಿ.ರವಿ  ಮಾತನಾಡಿ,   ಪ್ರಧಾನಮಂತ್ರಿ   ನರೇಂದ್ರ ಮೋದಿ ಇಡೀ ದೇಶದ ಜನರು ಬಿಜೆಪಿಗೆ ಹೈಕಮಾಂಡ್ ಎಂದಿದ್ದಾರೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮೋದಿಯವರ ಮನೆ ಹಾಳಾಗಿ ಹೋಗಾ ಎಂದು ಕೀಳು ಮಟ್ಟದ ಹೇಳಿಕೆ ನೀಡಿ, ತಮ್ಮ ನಾಲಿಗೆಯನ್ನು ಹರಿಬಿಟ್ಟಿರುವುದನ್ನು ಬಿಜೆಪಿ ಉಗ್ರವಾಗಿ ಖಂಡಿಸುತ್ತದೆ ಎಂದರು.

ಈ ಸಂಧರ್ಭದಲ್ಲಿ ಮಾಜಿ ಶಾಸಕ   ಮುನಿರಾಜು , ರಾಜ್ಯ ಸಹವಕ್ತಾರ  ಎ.ಹೆಚ್.ಆನಂದ,  ಎಸ್.ಪ್ರಕಾಶ್,* ಬಿಬಿಎಂಪಿ ಮಾಜಿ ಉಪಮೇಯರ್   ಎಸ್.ಹರೀಶ್  ಉಪಸ್ಥಿತರಿದ್ದರು.

Related Articles

Back to top button