Latest

ಸಿಡಿಲಿನ ಅಬ್ಬರಕ್ಕೆ ತಂದೆ- ಮಗ ಬಲಿ

ಪ್ರಗತಿವಾಹಿನಿ ಸುದ್ದಿ ಕಲಬುರಗಿ: ಸೇಡಂ ತಾಲೂಕಿನ ಕಡಚರ್ಲಾ ಗ್ರಾಮದಲ್ಲಿ ಸಿಡಿಲು ಬಡಿದು ತಂದೆ-ಮಗ ಮೃತಪಟ್ಟಿದ್ದಾರೆ.

ಮುಧೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪಿಲ್ಲಿಗುಂಟಾ ತಾಂಡಾ ನಿವಾಸಿಗಳಾದ ತುಳಚಾ ರಾಠೋಡ್(40), ಅವೀನ್ ರಾಠೋಡ್(16) ಮೃತಪಟ್ಟವರು.

ತಂದೆ-ಮಗ ಕೂಲಿ ಕೆಲಸಕ್ಕೆ ಹೋದಾಗ ಹಠಾತ್ತಾಗಿ ಬಂದೆರಗಿದ ಸಿಡಿಲಿನ ಹೊಡೆತಕ್ಕೆ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದರು.

ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Home add -Advt

ಆಸ್ಟ್ರೇಲಿಯಾದಲ್ಲಿ ಭುವನೇಶ್ವರ ಕುಮಾರ್ ಏಗಾಡಬೇಕಾದೀತೇ: ವಸೀಂ ಅಕ್ರಂ ಏನೆನ್ನುತ್ತಾರೆ?

Related Articles

Back to top button