Kannada NewsKarnataka NewsLatestPolitics

*ದೈಹಿಕ ಮತ್ತು ಮಾನಸಿಕ ಕ್ಷಮತೆಗೆ ಯೋಗ ಸಹಾಯಕ; ಗಜಾನನ ಮನ್ನಿಕೇರಿ*

ಪ್ರಗತಿವಾಹಿನಿ ಸುದ್ದಿ; ಧಾರವಾಡ: ವಿಶ್ವಯೋಗ ದಿನಾಚರಣೆ ಜೂನ 21 ಆಚರಣೆಯ ಸಂದರ್ಭದಲ್ಲಿ ಧಾರವಾಡ ಆಯುಕ್ತ ಕಛೇರಿಯ ಸಹನಿರ್ಧೆಶಕರಾದ ಗಜಾನನ ಮನ್ನಿಕೇರಿ ಯವರು
ಯೋಗ ದಿನಾಚರಣೆಯಲ್ಲಿ ಕರ್ನಾಟಕ ಪಬ್ಲಿಕ ಶಾಲೆ ಕಿರವತ್ತಿ (ಪ್ರೌಢ ಶಾಲೆ) ಇಲ್ಲಿ ಭಾಗವಹಿಸಿ ಯೋಗಾಸನ ಮಾಡಿದರು.

ನಂತರ ಯೋಗಪಟುಗಳನ್ನು ಉದ್ದೇಶಿಸಿ ಮಾತನಾಡಿ ಮಕ್ಕಳು ಪ್ರತಿದಿನ ಯೋಗಾಭ್ಯಾಸ ಮಾಡಬೇಕು. ಇದರಿಂದ ಆರೋಗ್ಯ ವೃದ್ದಿಸುತ್ತದೆ. ದೈಹಿಕ ಹಾಗೂ ಮಾನಸಿಕ ಕ್ಷಮತೆಗೆ ಯೋಗ ಪೂರಕ ಎಂದು ಹೇಳಿದರು.

Home add -Advt

ಈ ಸಂದರ್ಭದಲ್ಲಿ ಶಿರಸಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳಾದ ಪ್ರಕಾಶ ತಾರಿಕೋಪ್ಪ ತಾಲೂಕಾ ಇ,ಸಿ,ಓ, ಪ್ರಶಾಂತ ಜಿ.ಎನ್, ಭಾಗವಹಿಸಿದ್ದರು. ಮುಖ್ಯಾಧ್ಯಾಪಕರಾದ ಜನಾರ್ಧನ ಗಾಂವ್ಕರ ಹಾಗೂ ಸಹ ಶಿಕ್ಷಕರು ಸಿಬ್ಬಂದಿ ಉಪಸ್ಥಿತರಿದ್ದರು.

ಯೋಗ ಶಿಕ್ಷಕ ಹಾಗೂ ದೈಹಿಕ ಶಿಕ್ಷಕರಾದ ದಾಮೋದರ ಗೌಡ ಇವರು ವಿದ್ಯಾರ್ಥಿಗಳಿಗೆ ಯೋಗ ಮಾಡಿಸಿಕೊಟ್ಟರು.


Related Articles

Back to top button