Kannada NewsLatestNationalPolitics
*ತೆಲಂಗಾಣದಲ್ಲಿ ಅಪ್ಪ-ಮಗನಿಗೆ ಆಘಾತ; ಕೆಸಿಆರ್ ಹಾಗೂ ಪುತ್ರನಿಗೆ ಹಿನ್ನಡೆ*

ಪ್ರಗತಿವಾಹಿನಿ ಸುದ್ದಿ;
ಹೈದರಾಬಾದ್: ತೆಲಂಗಾಣ ವಿಧನಸಭಾ ಚುನಾವಣೆ ಮತ ಎಣಿಕೆ ಕಾರ್ಯ ಚುರುಕುಗೊಂಡಿದ್ದು, ಆಡಳಿತಾರೂಢ ಬಿಆರ್ ಎಸ್ ಹಿನ್ನಡೆಯಲ್ಲಿದೆ. ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ.
ತೆಲಂಗಾಣದಲ್ಲಿ ಹಾಲಿ ಸಿಎಂ ಚಂದ್ರಶೇಖರ್ ರಾವ್ ಹಾಗೂ ಪುತ್ರ ಕೆ.ಟಿ.ರಾಮರಾವ್ ಇಬ್ಬರೂ ಸ್ವಕ್ಷೇತ್ರದಲ್ಲಿ ಹಿನ್ನಡೆಯಲ್ಲಿದ್ದಾರೆ. ಸಿರ್ಸಿಲಾದಲ್ಲಿ ಕೆ.ಟಿ.ರಾಮರಾವ್ ಹಿನ್ನಡೆ ಪಡೆದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ರೇವಂತ್ ರೆಡ್ಡಿ ಕಾಮರೆಡ್ಡಿ ಹಾಗೂ ಕೊಡಂಗಲ್ ಎರಡೂ ಕ್ಷೇತ್ರಗಳಲ್ಲಿ ಮುನ್ನಡೆಯಲಿದ್ದಾರೆ. ಇನ್ನೊಂದೆಡೆ ತೆಲಂಗಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ.




