Kannada NewsLatest

ರಾಜ್ಯದಲ್ಲಿ ಇಂದು 73 ಜನರ ಸಾವು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು  – ರಾಜ್ಯದಲ್ಲಿ ಇಂದು 2738 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. 73 ಜನರು ಸೋಂಕಿನಿಂದ ಸಾವಿಗೀಡಾಗಿದ್ದಾರೆ.

ಬೆಂಗಳೂರಿನಲ್ಲಿ 1315, ಯಾದಗಿರಿ 162, ಮೈಸೂರು 151, ದಕ್ಷಿಣ ಕನ್ನಡ 131, ಬಳ್ಳಾರಿ 106, ಕಲಬುರಗಿ 89, ವಿಜಯಪುರ 86, ಶಿವಮೊಗ್ಗ 74, ಧಾರವಾಡ 71, ಉಡುಪಿ 53, ತುಮಕೂರು 48, ರಾಯಚೂರು, ದಾವಣಗೆರೆ 45 ಜನರಿಗೆ ಸೋಂಕು ದೃಢಪಟ್ಟಿದೆ.

Home add -Advt

ಚಿಕ್ಕಬಳ್ಳಾಪುರ 42, ಉತ್ತರ ಕನ್ನಡ ಹಾಗೂ ಬಾಗಲಕೋಟೆ 37, ಕೊಪ್ಪಳ್ಳ 31, ಮಂಡ್ಯ 30, ಕೊಡಗು 29, ಬೆಳಗಾವಿ 27, ಹಾಸನ 25, ಬೀದರ್ 23, ಬೆಂಗಳೂರು ಗ್ರಾಮಾಂತರ, ಕೋಲಾರ 21, ಚಿಕ್ಕಮಗಳೂರು 10, ಚಾಮರಾಜನಗರ 9, ಚಿತ್ರದುರ್ಗ 8, ಗದಗ, ಹಾವೇರಿ 6 ಜನರಿಗೆ ಸೋಂಕು ತಗುಲಿದೆ.

ಇಂದು ಬೆಂಗಳೂರಿನಲ್ಲಿ 47 ಜನರು ಸಾವಿಗೀಡಾಗಿದ್ದಾರೆ. ಮೈಸೂರಲ್ಲಿ 6, ಧಾರವಾಡದಲ್ಲಿ 5, ಶಿವಮೊಗ್ಗದಲ್ಲಿ 3, ಬಾಗಲಕೋಟೆ, ಕೊಡಗು, ಬೆಳಗಾವಿಗಳಲ್ಲಿ ತಲಾ ಇಬ್ಬರು ಸಾವಿಗೀಡಾಗಿದ್ದಾರೆ.

ಬೆಳಗಾವಿಯಲ್ಲಿ ಅಥಣಿಯ 72 ವರ್ಷದ ವ್ಯಕ್ತಿ ಹಾಗೂ ಗೋಕಾಕದ 45 ವರ್ಷದ ವ್ಯಕ್ತಿ ಸಾವಿಗೀಡಾಗಿದ್ದಾರೆ.

ರಾಜ್ಯದಲ್ಲಿ ಸೋಂಕಿತರ ಒಟ್ಟೂ ಸಂಖ್ಯೆ 41,581. ರಾಜ್ಯದಲ್ಲಿ ಸಾವಿಗೀಡಾದವರ ಒಟ್ಟೂ ಸಂಖ್ಯೆ 737.

 

Related Articles

Back to top button