National

*ದೇವಸ್ಥಾನಗಳ ಸಾವಿರ ಕೆಜಿಗೂ ಹೆಚ್ಚು ಚಿನ್ನ ಕರಗಿಸಿ ಬ್ಯಾಂಕ್ ನಲ್ಲಿ ಇಟ್ಟ ಸರ್ಕಾರ*

ಪ್ರಗತಿವಾಹಿನಿ ಸುದ್ದಿ: ತಮಿಳುನಾಡಿನ 21 ದೇವಾಲಯಗಳಿಗೆ ಭಕ್ತರು ನೀಡಿದ್ದ ಸುಮಾರು 1,000 ಕೆಜಿಗೂ ಹೆಚ್ಚು ಚಿನ್ನವನ್ನು ಕರಗಿಸಿ, 24-ಕ್ಯಾರೆಟ್ ಚಿನ್ನದ ಬಾರ್‌ಗಳಾಗಿ ಪರಿವರ್ತಿಸಿ ತಮಿಳುನಾಡು ಸರ್ಕಾರ ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಿದೆ.

ಈ ಚಿನ್ನದ ಬಾರ್‌ಗಳ ಮೂಲಕ ಸರ್ಕಾರಕ್ಕೆ ಸುಮಾರು 18 ಕೋಟಿ ವಾರ್ಷಿಕ ಬಡ್ಡಿ ಬರಲಿದೆ. ಈ ಹೂಡಿಕೆಯಿಂದ ಬರುವ ಬಡ್ಡಿಯನ್ನು ಸಂಬಂಧಪಟ್ಟ ದೇವಸ್ಥಾನಗಳ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದು ತಮಿಳುನಾಡು ಸರ್ಕಾರ ಹೇಳಿಕೊಂಡಿದೆ.

ಈ ಕುರಿತು ಹಿಂದು ಧಾರ್ಮಿಕ ಮತ್ತು ದಾನ ಹಾಗೂ ದತ್ತಿ ಇಲಾಖೆಯ ಈ ಟಿಪ್ಪಣಿಯನ್ನು ತಮಿಳುನಾಡಿನ ವಿಧಾನಸಭೆಯಲ್ಲಿ ಮುಜರಾಯಿ ಇಲಾಖೆ ಸಚಿವ ಪಿ.ಕೆ.ಶೇಖರ್ ಬಾಬು ಈ ಮಾಹಿತಿ ನೀಡಿದ್ದಾರೆ.

Home add -Advt

Related Articles

Back to top button