Belagavi NewsBelgaum NewsKannada NewsKarnataka News

*ವಿಜೃಂಭಣೆಯಿಂದ ನಡೆಯುತ್ತಿರುವ‌ ಹುದಲಿಯ ಮಹಾಲಕ್ಷ್ಮಿ ಜಾತ್ರಾ ಮಹೋತ್ಸವ*

ಪ್ರಗತಿವಾಹಿನಿ‌ ಸುದ್ದಿ, ಬೆಳಗಾವಿ: ಬೆಳಗಾವಿ ತಾಲೂಕಿನ ಹುದಲಿ ಗ್ರಾಮದಲ್ಲಿ ಅದ್ದೂರಿಯಾಗಿ ನಡೆಯುತ್ತಿರುವ ಗ್ರಾಮ ದೇವತೆ ಶ್ರೀ ಮಹಾಲಕ್ಷ್ಮಿ  ದೇವಿಯ ಜಾತ್ರಾ ಮಹೋತ್ಸವುದಲ್ಲಿ ಇಂದು ಜರುಗಿದ ರಥೋತ್ಸವುದಲ್ಲಿ ಪಾಲ್ಗೊಂಡ ಜನ ಸಾಗರವನ್ನು ನೋಡಲು ಎರಡು ಕಣ್ಣುಗಳು ಸಾಕ್ಷಿಯಾಗಿದೆ.

16 ರಂದು ಪುನ: 12 30ಕ್ಕೆ ರಥೋತ್ಸವ ಪ್ರಾರಂಭವಾಗಿ ಆಲದ ಗಿಡದ ಶ್ರೀ ಕರೆಮ್ಮ ದೇವಿಗೆ ದೈವಾಚಾರಿಯಿಂದ ಉಡಿ ತುಂಬಿ ಮತ್ತೆ ರಥೋತ್ಸವ ಮುಂದುವರೆದು ಸಂಜೆ 6. ಗಂಟೆಗೆ  ಜಿಡ್ಡಿಯಲ್ಲಿ ಮೂಲ ಪಾದ ಗಟ್ಟಿ  ವಾಸ್ತವ್ಯ. ರಾತ್ರಿ 10.ಗಂಟೆಗೆ ರಥದ ಹತ್ತಿರ “ಸಂಗ್ಯಾಬಾಳ್ಯಾ” ನಾಟಕ ಪ್ರದರ್ಶನವಾಗಲಿದೆ.

17 ರಂದು ಮದ್ಯಾಹ್ನ 12.15ಕ್ಕೆ ಪಾದಗಟ್ಟೆಯಿಂದ ರಥೋತ್ಸವ ಪ್ರಾರಂಭವಾಗಿ ಶಾಲೆಯ ಆವರಣದಲ್ಲಿನ ಭವ್ಯ ಮಂಟಪದ ಹತ್ತಿರ ರಥೋತ್ಸವ ಮುಕ್ತಾಯವಾಗಿ ಶ್ರೀ ದೇವಿಯ ಹೋನ್ನಾಟದ ನಂತರ ಶೃಂಗರಿದ ಭವ್ಯ ಮಂಟಪದಲ್ಲಿ ಶ್ರೀ ದೇವಿಯ ಪ್ರತಿಷ್ಠಾಪಣೆ ಗೊಳಿಸುವುದು.ಚಚಡಿ ಕಲಾತಂಡದವರಿಂದ ರಾತ್ರಿ 10. ಗಂಟೆಗೆ  “ರೈತ ಚಲ್ಲಿದ ರಕ್ತ” ನಾಟಕ ಪ್ರದರ್ಶನಗೊಳ್ಳಲಿದೆ. 

18 ರಂದು ಬೆಳಿಗ್ಗೆ 9 ಗಂಟೆಗೆ ಕುದುರೆ ಶರ್ಯತ್ತುಗಳು (ರೌಂಡ ರೇಸ್ 5 ಕ್ಕಿಂತ ಹೆಚ್ಚು ಜೋಡಿಗಳು ಕೂಡಿದರೆ ಮಾತ್ರ) ಸಂಜೆ 5.ಗಂಟೆಗೆ ಶಿರಗುಪ್ಪಿಯ ಆದರ್ಶ ಶಿಕ್ಷಣ ಸಂಸ್ಥೆಯ ಶ್ರೀ ಸ್ವಾಮಿ ವಿವೇಕಾನಂದ ಯೋಗ ಮತ್ತು ಮಲ್ಲಕಂಭ ತರಬೇತಿ ಕೇಂದ್ರ ವತಿಯಿಂದ ಮಲ್ಲಕಂಭ,ರಾತ್ರಿ 9.ಗಂಟೆಗೆ ಕೊಲ್ಲಾಪೂರ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

19 ರಂದು ಬೆಳಿಗ್ಗೆ 9 ಗಂಟೆಗೆ ಜೋಡತ್ತಿನ ಖಾಲಿ ಭಂಡಿ ಶರ್ಯತ್ತುಗಳು,ಮದ್ಯಾಹ್ನ 3 ಗಂಟೆಗೆ ಕುಸ್ತಿಗಳು ನಡೆಯಲಿವೆ. ರಾತ್ರಿ 9 ಗಂಟೆಗೆ ದಾವೂದ ತಾಳಿಕೋಟಿ ತಂಡದವರಿಂದ “ಕಟಕ ರೊಟ್ಟಿ ಕಲ್ಲವ್ವ” ನಾಟಕ ಪ್ರದರ್ಶನವಾಗಲಿದೆ. 20 ರಂದು ಮುಂಜಾನೆ 9 ಗಂಟೆಗೆ ಸ್ಲೋ ಬೈಕ್ ಸ್ಪರ್ಧೆ, ಮದ್ಯಾಹ್ನ 3. ಗಂಟೆಯಿಂದ ಪ್ರಸಿದ್ದ ಕುಸ್ತಿಪಟುಗಳಿಂದ ಜಂಗೀ ನಿಕಾಲಿ ಕುಸ್ತಿ ಪಂದ್ಯಾವಳಿಗಳು ನಡೆಯಲಿವೆ.

ರಾತ್ರಿ10 ಗಂಟೆಗೆ ದಾವೂದ ತಾಳಿಕೊಟಿ ತಂಡದವರಿಂದ ಹಳ್ಳಿ ಹುಡುಗಿ ಮೊಸರು ಗಡಗಿ ನಾಟಕ ಮತ್ತು ಹೊನಲು ಬೆಳಕಿನಲ್ಲಿ ಕಬಡ್ಡಿಗಳು ನಡೆಯಲಿವೆ. 

21 ರಂದು ಮುಂಜಾನೆ 9. ಗಂಟೆಗೆ ಟೇಲರ್ ಸಹಿತ ಟ್ರ್ಯಾಕ್ಟರ ರಿವರ್ಸ ಓಡಿಸುವ ಸ್ಪರ್ಧೆ, ರಾತ್ರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಸವದತ್ತಿಯ ಶ್ರೀ ನಾಗಲಿಂಗ ಸಾಹಿತ್ಯ ಜಾಣಪದ ಕಲಾ ಪೋಷಕರ ಯುವ ಬಳಗ ಹಿರೇಬೂದನೂರ ಇವರ ಆಶ್ರಯದಲ್ಲಿ ಜಾಣಪದ ಉತ್ಸವ ಹಾಗೂ ಬಯಲಾಟ ಸಂಭ್ರಮ, ಗೀ ಗೀ ಪದ, ಜಾಣಪದ ಸಂಗೀತ, ಡೊಳ್ಳಿನ ಪದ, ಭಜನಾ ಪದ, ಖಣಿವಾದನ, ದೀಪನೃತ್ಯ, ಬಯಲಾಟ ಪದ, ಜೋಗತಿ ನೃತ್ಯ, ಸನ್ನಾಟದ ಪದ, ಶ್ರೀ ನಿಜಗುಣ ಶಿವಯೋಗಿ ಪೌರಾನಿಕ ನಾಟಕ ಸೇರಿದಂತೆ ಸೋಬಾನಪದಗಳು ನಡೆಯಲಿವೆ.

ಜಾತ್ರೆಯ ಕೊನೆಯ ದಿನ 22 ರಂದು ಮುಂಜಾನೆ 9  ಗಂಟೆಗೆ ವಿವಿಧ ಮಹನೀಯರಿಗೆ ಸತ್ಕಾರ ಸಮಾರಂಭ ನಡೆಯಲಿದೆ. ಸಂಜೆ 4 ಗಂಟೆಯಿಂದ ದೇವಿಯ ಹೊನ್ನಾಟವು ಪ್ರಾರಂಭವಾಗಿ ಸಂಜೆಗೆ ಸಿಮೋಲಂಘನ ಮಾಡಿ ಜಾತ್ರೆಗೆ ಕೊನೆಗೊಳ್ಳಲಿದೆ ಎಂದು ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರಾ  ಕಮಿಟಿ ಹುದಲಿ ಇವರು ಎಲ್ಲ ಸಾರ್ವಜನಿಕರು ಹೆಚ್ಚಿನ ಜನಸಂಖ್ಯೆಯಲ್ಲಿ ಪಾಲ್ಗೊಂಡು  ಅಮ್ಮನ್ನವರ ಆರ್ಶೀವಾದವನ್ನು ಪಡೆದುಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button