Belagavi NewsBelgaum NewsPolitics

*ಮುಂಬೈಯನ್ನು ಕೇಂದ್ರಾಡಳಿತ ಪ್ರದೇಶ ಮಾಡಿ: ಲಕ್ಷ್ಮಣ ಸವದಿ* 

ಪ್ರಗತಿವಾಹಿನಿ ಸುದ್ದಿ ಬೆಳಗಾವಿ: ಮುಂಬೈ ಮೇಲೆ ನಮಗೂ ಹಕ್ಕಿದೆ ಮುಂಬೈಯನ್ನು ಕ್ರೇಂದ್ರಾಡಳಿತ ಪ್ರದೇಶ ಮಾಡಿ ಎಂದು ಸದನದಲ್ಲಿ ಶಾಸಕ ಲಕ್ಷ್ಮಣ ಸವದಿ ಆಗ್ರಹಿಸಿದ್ದಾರೆ. 

ಸುವರ್ಣಸೌಧ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆಯಲ್ಲಿ ಮಾತನಾಡಿದ ಅವರು, ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಿ ಎಂಬ ಮಹಾರಾಷ್ಟ್ರದ ಬೇಡಿಕೆ ವಿಚಾರವನ್ನ ಪ್ರಸ್ತಾಪಿಸಿ ಮಹಾರಾಷ್ಟ್ರಕ್ಕೆ ಟಾಂಗ್ ಕೊಟ್ಟರು. ಮಹಾರಾಷ್ಟ್ರದ ಮತಿ ಹೀನರೊಬ್ಬರು ಮಾತನ್ನು ಹೇಳಿದ್ದರು ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಿ ಎಂದಿದ್ದರು. ಹಾಗಾದರೆ ಮುಂಬೈಯಲ್ಲಿ ನಮ್ಮ ಹಕ್ಕಿದೆ ಎಂಬ ಮಂಡನೆ ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರಕ್ಕೆ ಈ ಮನವಿ ಮಾಡುತ್ತೇವೆ, ಮುಂಬೈಯನ್ನು ಕರ್ನಾಟಕಕ್ಕೆ ಬಿಟ್ಟು ಬಿಡಿ ಎಂದು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸೋಣ ಮುಂಬೈಯನ್ನು ಕೇಂದ್ರಾಡಳಿತ ಪ್ರದೇಶ ಮಾಡಿ ಮುಂಬೈ ಮೇಲೆ ನಮಗೂ ಹಕ್ಕು ಇದೆ ಎಂದರು.

Home add -Advt

ಬೆಳಗಾವಿ ಕರ್ನಾಟಕದ ಎರಡನೇ ರಾಜಧಾನಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ನಾವು ಘೋಷಣೆ ಮಾಡಿದ್ದೇವೆ ಮಹಾಜನ್ ಆಯೋಗ ವರದಿ ಕೂಡಾ ಒಪ್ಪಿದೆ ಎಂದರು.

Related Articles

Back to top button