Latest

ಈಶ್ವರಪ್ಪ-ಸಾ.ರಾ.ಮಹೇಶ್ ಭೇಟಿಯ ಅಸಲಿಯತ್ತೇನು?

 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: 

6ನೇ ಬಾರಿಯ ಆಪರೇಶನ್ ಕಮಲ ಸರ್ಕಸ್ ಇನ್ನೇನು ಯಶಸ್ವಿಯಾಯಿತು ಎನ್ನುವ ಹೊತ್ತಿಗೆ ಬಿಜೆಪಿ ತಾನೇ ವಿವಾದವೊಂದನ್ನು ಮೈಮೇಲೆಳೆದುಕೊಂಡಿದೆ.

ಇದನ್ನೇ ಕಾಯುತ್ತಿದ್ದರೆನ್ನುವಂತೆ ಕೆಲವರು ಅದಕ್ಕೆ ಸರಿಯಾದ ಪ್ರಚಾರ ಕೊಡುವಲ್ಲೂ ಯಶಸ್ವಿಯಾಗಿದ್ದಾರೆ.

Home add -Advt

ಬಿಜೆಪಿ ಮುಖಂಡರಾದ ಮುರಳೀಧರ್ ರಾವ್ ಮತ್ತು ಕೆ.ಎಸ್. ಈಶ್ವರಪ್ಪ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರನ್ನು  ಭೇಟಿ ಮಾಡಿದ ವಿವಾದ ಪಕ್ಷದ ಆಂತರಿಕ ವಲಯದಲ್ಲೂ ಭಾರಿ ಬಿರುಗಾಳಿ ಎಬ್ಬಿಸಿದೆ.

ಸಚಿವ ಮಹೇಶ್,  ಪ್ರವಾಸೋದ್ಯಮ ಇಲಾಖೆಯ ಕೆ.ಕೆ.ಗೆಸ್ಟ್ ಹೌಸ್ ನಲ್ಲಿ ಈ ಇಬ್ಬರು ಬಿಜೆಪಿ ಮುಖಂಡರ ಜೊತೆ ಚರ್ಚಿಸಿದ್ದರು. ಈ ಭೇಟಿ ಭಾರೀ ಸುದ್ದಿಯಾಗಿದೆ. ಇದೊಂದು ಆಕಸ್ಮಿಕ ಭೇಟಿಯೆಂದು ಎರಡೂ ಪಕ್ಷಗಳು ಸ್ಪಷ್ಟನೆ  ನೀಡಿವೆ. ಆದರೆ, ಅವರು ಭೇಟಿಯಾಗುವ ಮುನ್ನವೇ ಮಾಧ್ಯಮಗಳಿಗೆ ಈ ಸುದ್ದಿ ಹೋಗಿದೆ.

Related Articles

Back to top button