Latest

ಕೇಬಲ್ ರಿಪೇರಿಗೆಂದು ಬಂದು ವೈದ್ಯೆಯನ್ನೇ ಮುಗಿಸಿದರು

ಪ್ರಗತಿವಾಹಿನಿ ಸುದ್ದಿ; ಆಗ್ರಾ: ಕೇಬಲ್ ರಿಪೇರಿಗೆಂದು ಮನೆಗೆ ಬಂದ ದುಷ್ಕರ್ಮಿಗಳು ವೈದ್ಯೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

ಹತ್ಯೆಗೀಡಾದ ವೈದ್ಯೆಯನ್ನು ನಿಶಾ ಸಿಂಘಾಲ್ ಎಂದು ಗುರುತಿಸಲಾಗಿದೆ. ಕೇಬಲ್ ರಿಪೇರಿ ಮಾಡುವುದಾಗಿ ಹೇಳಿ ಮನೆಗೆ ಬಂದ ಆರೋಪಿ, ವೈದ್ಯೆಯನ್ನು ಭೀಕರವಾಗಿ ಹತ್ಯೆ ಮಾಡಿದ್ದು, ಬಳಿಕ ಆಕೆಯ ಮಗಳ ಮೇಲೂ ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ.

ಸದ್ಯ ಆರೋಪಿ ಶುಭಂ ಎಂಬಾತನನ್ನು ಬಂಧಿಸಲಾಗಿದ್ದು, ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button