Latest

ಓರ್ವ ಭ್ರಷ್ಟ ಸಿಎಂ ತೆಗೆದು ಇನ್ನೋರ್ವ ಭ್ರಷ್ಟನನ್ನು ಸಿಎಂ ಮಾಡ್ತಾರೆ; ಸಿದ್ದರಾಮಯ್ಯ ಕಿಡಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜಿನಾಮೆ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಸ್ವತಂತ್ರಭಾರತದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಅಧಿಕಾರದಲ್ಲಿತ್ತು. ಯಡಿಯೂರಪ್ಪ ಮಾತ್ರವಲ್ಲ ಬಿಜೆಪಿಯೇ ರಾಜ್ಯದಿಂದ ತೊಲಗಬೇಕೇದೆ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸಿಎಂ ಯಡಿಯೂರಪ್ಪ ರಾಜೀನಾಮೆ ಗೊತ್ತಿರುವ ವಿಚಾರ. 6 ತಿಂಗಳ ಹಿಂದೆಯೇ ಬಿಎಸ್ ವೈ ರಾಜೀನಾಮೆ ನೀಡುತ್ತಾರೆ ಎಂದು ನಾನು ಹೇಳಿದ್ದೆ. ಭ್ರಷ್ಟ ಮುಖ್ಯಮಂತ್ರಿಯನ್ನು ಅಧಿಕಾರದಿಂದ ಕೆಳಗಿಳಿಸಿದ್ದಾರೆ. ಬಿಜೆಪಿ ಹೈಕಮಾಂಡ್ ಒಬ್ಬ ಭ್ರಷ್ಟ ಮುಖ್ಯಮಂತ್ರಿ ತೆಗೆದು ಮತ್ತೋರ್ವ ಭ್ರಷ್ಟನನ್ನು ಮುಖ್ಯಮಂತ್ರಿ ಮಾಡ್ತಾರೆ. ಇಡೀ ಬಿಜೆಪಿಯೇ ಭ್ರಷ್ಟ ಪಕ್ಷ. ಹಾಗಾಗಿ ಯಾರೇ ಸಿಎಂ ಆದರೂ ಭ್ರಷ್ಟನೇ ಬರುತ್ತಾನೆ ಇದರಿಂದ ರಾಜ್ಯದ ಜನತೆಗೆ ಏನು ಪ್ರಯೋಜನ? ಎಂದು ಪ್ರಶ್ನಿಸಿದರು.

ಬಿಜೆಪಿಯಲ್ಲಿ ಯಡಿಯೂರಪ್ಪಗೆ ಸರಿಸಾಟಿಯಾದ ನಾಯಕ ಬೇರೆ ಇಲ್ಲ ಎಂಬುದು ನಿಜ. ಮುಂದೆ ಯಾರು ಸಿಎಂ ಅಗ್ತಾರೆ ಎಂಬುದು ಗೊತ್ತಿಲ್ಲ. ಆದರೆ ಮತ್ತೋರ್ವ ಭ್ರಷ್ಟನನ್ನು ಸಿಎಂ ಮಾಡ್ತಾರೆ ಅಷ್ಟೆ. ನನ್ನ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರ ಎಂದು ಆರೋಪಿಸುತ್ತಿದ್ದರು. ಆದರೆ ಬಿಎಸ್ ವೈ ಸರ್ಕಾರ 30 ಪರ್ಸೆಂಟ್ ಸರ್ಕಾರವಾಗಿತ್ತು. ರಾಜ್ಯ 10 ವರ್ಷ ಆರ್ಥಿಕವಾಗಿ ಹಿಂದಕ್ಕೆ ಹೋಗಿದೆ. ಬಿಜೆಪಿಯನ್ನೇ ರಾಜ್ಯದಿಂದ ತೊಲಗಿಸಬೇಕಿದೆ ಎಂದು ಹೇಳಿದರು.

ದೆಹಲಿಯಿಂದ ಒತ್ತಡವಿರಲಿಲ್ಲ; ನಾನಾಗಿಯೇ ರಾಜೀನಾಮೆ ನೀಡಿದ್ದೇನೆ ಎಂದ ಯಡಿಯೂರಪ್ಪ

Home add -Advt

Related Articles

Back to top button