Latest

ರಥೋತ್ಸವದ ವೇಳೆ ಅವಘಡ; ಏಕಾಏಕಿ ಮುರಿದು ಬಿದ್ದ ವೀರಭದ್ರೇಶ್ವರ ರಥ

ಪ್ರಗತಿವಾಹಿನಿ ಸುದ್ದಿ; ಚಾಮರಾಜನಗರ: ರಥೋತ್ಸವದ ವೇಳೆ ಅವಘಡವೊಂದು ಸಂಭವಿಸಿದ್ದು, ಐತಿಹಾಸಿಕ ಚಾಮರಾಜನಗರದ ವೀರಭದ್ರೇಶ್ವರ ಸ್ವಾಮಿ ತೇರು ಮುರಿದು ಬಿದ್ದ ಘಟನೆ ನಡೆದಿದೆ.

ಚಾಮರಾಜನಗರದ ಚೆನ್ನಪ್ಪನಪುರದಲ್ಲಿ ಈ ಅವಘಡ ಸಂಭವಿಸಿದೆ. ವೀರಭದ್ರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ವೀರಭದ್ರೇಶ್ವರ ದೇವರ ರಥೋತ್ಸವ ನಡೆಯುತ್ತಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ರಥ ಎಳೆಯುತ್ತಿದ್ದ ವೇಳೆ ರಥದ ಚಕ್ರ ಮುರಿದಿದೆ. ನೋಡ ನೋಡುತ್ತಿದ್ದಂತೆಯೇ ರಥ ಉರುಳಿ ಬಿದ್ದಿದೆ.

Home add -Advt

ಸಧ್ಯ ಭಕ್ತರು ಕ್ಷಣಾರ್ಧದಲ್ಲಿ ಪಾರಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಆದರೆ ರಥೋತ್ಸವದ ವೇಳೆ ಸಂಭವಿಸಿದ ಈ ಅವಘಡದಿಂದಾಗಿ ಭಕ್ತರಲ್ಲಿ ಆತಂಕ ಮನೆ ಮಾಡಿದೆ.

ಪುನೀತ್ ರಾಜ್ ಕುಮಾರ್ ಗೆ ಕನ್ನಡ ರತ್ನ ಪ್ರಶಸ್ತಿ; ಬೆಂಗಳೂರಿಗೆ ಆಗಮಿಸಿದ ನಟ ರಜನಿಕಾಂತ್

https://pragati.taskdun.com/latest/rajanikanthbngalorevisitkannada-ratha-awardpuneeth-raj-kumar/

Related Articles

Back to top button