Kannada NewsLatest

ವಿಶ್ವ ಹಿಂದೂ ಪರಿಷತ್ ಬೆಳಗಾವಿ ಜಿಲ್ಲಾ ಅಭಿಯಾನಕ್ಕೆ ಚಾಲನೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಶ್ವ ಹಿಂದೂ ಪರಿಷತ್ ಉತ್ತರ ಕರ್ನಾಟಕ ಪ್ರಾಂತ ಬೆಳಗಾವಿ ಜಿಲ್ಲೆ ವಿಶ್ವಕರ್ಮ ದೇವಸ್ಥಾನದ ಸಭಾಂಗಣದಲ್ಲಿ ಇತ್ತೀಚೆಗೆ ಸದ್ಭಾವನಾ ಅಭಿಯಾನವನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಭಾರತ ಕೇಂದ್ರದ ಪ್ರಧಾನ ಮಂತ್ರಿ ಸ್ಥಾಣು ಮಲ್ಲಾಯಿ ಜಿ ಅವರು ಉತ್ತರ ಕರ್ನಾಟಕ ಕೋಶಾಧಿಕಾರಿ ಕೃಷ್ಣ ಭಟ್, ವಿಜಯ್ ಜಾಧವ್ ಇದ್ದರು.

ಬೌಕಣ್ಣ ಪಾಟೀಲ್, ಅಚ್ಯುತ ಕುಲಕರ್ಣಿ, ವಿಶ್ವಕರ್ಮ ಸಮಾಜದ ಪದಾಧಿಕಾರಿಗಳಾದ ಭಾರತ್ ಶಿರೋಳ್ಕರ್, ಪ್ರಭಾಕರ ಸುತಾರ್, ಸೋಮನಾಥ ಕಾಳೆ ಕೃಷ್ಣ ಕಣಬರಕರ್, ವಿಜಯ್ ಸುತಾರ್,  ರಂಜನಾ ಮೋಡ್ಗೇಕರ್, ವೈಷ್ಣವಿ ಮುಚ್ಚಂಡಿಕರ್, ಪ್ರೀತಿ ಲೋಹರ್, ರೇಖಾ ಅಂಬೇವಾಡಿಕರ್ ಹಾಗೂ ಕರ್ನಾಟಕ ಓಬಿಸಿ ಮೋರ್ಚಾದ ಬಿಜೆಪಿ ಕಾರ್ಯದರ್ಶಿ ಹಾಗೂ ಸಕಲ ಮರಾಠಾ ಸಮಾಜದ ಸಂಯೋಜಕ ಕಿರಣ್ ಜಾಧವ್ ಅವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಾಗೂ 18ಕ್ಕೂ ಹೆಚ್ಚು ಸಮುದಾಯದವರು ಮತ್ತು ವಿಶ್ವ ಹಿಂದೂ ಪರಿಷತ್ ನ ಪ್ರಮುಖರು , ಸದಸ್ಯರು ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಬೊಮ್ಮಾಯಿ PAಗೆ ಹನಿಟ್ರ್ಯಾಪ್ ಆರೋಪ

https://pragati.taskdun.com/cm-basavaraj-bommaipa-harishhoney-trap/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button