Belagavi NewsBelgaum NewsElection NewsKannada NewsKarnataka NewsPolitics

ಮತ್ತೊಮ್ಮೆ ಮೋದಿ ಪ್ರಧಾನಿ ಮಾಡಲು ಅಣ್ಣಾಸಾಹೇಬ ಜೊಲ್ಲೆ ಗೆಲ್ಲಿಸಿ: ಶಾಸಕ ನಿಖಿಲ ಕತ್ತಿ 

ಪ್ರಗತಿವಾಹಿನಿ ಸುದ್ದಿ:  ಭಾರತವನ್ನು ಬಡತನದಿಂದ  ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ನರೇಂದ್ರ ಮೋದಿ ಅವರು ದೊಡ್ಡ ಯೋಜನೆಯನ್ನೇ ರೂಪಿಸಿದ್ದಾರೆ. ಮುಂಬರುವ 5 ವರ್ಷಗಳಲ್ಲಿ ಅದನ್ನು ಸಾಕಾರವಾಗುವುದನ್ನು ನೋಡಲು ಮತ್ತೆ ಮೋದಿಯವರನ್ನು ಪ್ರಧಾನಿಯನ್ನಾಗಿಸೋಣ. ಬಿಜೆಪಿ ಅಭ್ಯರ್ಥಿಯಾದ  ಅಣ್ಣಾಸಾಹೇಬ ಜೊಲ್ಲೆ ಅವರನ್ನು ಕಮಲದ ಮುಂದೆ ಬಟನ್ ಒತ್ತಿ ಬಹುಮತದಿಂದ ಗೆಲ್ಲಿಸೋಣವೆಂದು ಕಾರ್ಯಕರ್ತರಿಗೆ ಶಾಸಕ ನಿಖಿಲ ಕತ್ತಿ ಕರೆ ನೀಡಿದರು.

ಮಂಗಳವಾರ ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಅಮ್ಮಣಗಿ ಮತ್ತು ಕಣಗಲಾ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಲೋಕಸಭೆ ಚುನಾವಣೆ ಅಂಗವಾಗಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ  ಅಣ್ಣಾಸಾಹೇಬ ಜೊಲ್ಲೆ ಯವರ ಪರವಾಗಿ ಹುಕ್ಕೇರಿ ಶಾಸಕ ನಿಖಿಲ ಕತ್ತಿ ಹಾಗೂ ಮಾಜಿ ಸಚಿವೆ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಪ್ರಚಾರ ಸಭೆ ನಡೆಸಿದರು.

ಈ ವೇಳೆ ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸಂಸದರು 8810ಕ್ಕೂ ಅಧಿಕ ಕೋಟಿಯ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ.  ಕೇಂದ್ರ ಸರ್ಕಾರದ ಯೋಜನೆಗಳನ್ನು ಲೋಕಸಭಾ ಕ್ಷೇತ್ರದ ಜನರಿಗೆ ಮುಟ್ಟಿಸುವ ಕಾರ್ಯವನ್ನು  ಸಂಸದರು ಮಾಡಿದ್ದಾರೆ. ಕ್ಷೇತ್ರದಲ್ಲಿ ಸಿ.ಸಿ.ಟಿ.ವಿ. ಆಂಬುಲೆನ್ಸ್, ಬಸ್ ನಿಲ್ದಾಣ, ರಸ್ತೆ, ಹಾಗೂ ಹಲವಾರು ಕಾರ್ಯಗಳನ್ನು ಮಾಡಿದ್ದಾರೆ. ಮುಂದಿನ 5 ವರ್ಷ ಚಿಕ್ಕೋಡಿ ಕ್ಷೇತ್ರವನ್ನು ಮತ್ತೊಮ್ಮೆ ಅಭಿವೃದ್ದಿ ಕಾಣಲು  ಅಣ್ಣಾಸಾಹೇಬ ಜೊಲ್ಲೆಯವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ರಾಜೇಂದ್ರ ಪಾಟೀಲ, ಸಂಜಯ ಶಿರಕೋಳಿ, ಮಹೇಶ ಕುಂಬಾರ, ಬಾಳಾಸಾಹೇಬ ಜಾಧವ, ಸುರೇಶ ಕುಲಕರ್ಣಿ, ಅಶೋಕ ಹಿರೆಕೂಡಿ, ತಾಸಿನ ಬಾನು, ಪ್ರಶಾಂತ ಪಾಟೀಲ, ಶರೋಹನ ನೇಸರಿ, ಮಹಾದೇವಿ ಪಾಟೀಲ, ಸ್ಥಳೀಯ ಮುಖಂಡರು, ಗಣ್ಯರು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

Back to top button