Karnataka News
*ತರಬೇತಿಗೆ ಬಂದಿದ್ದ ಯುವಕ ಹಠಾತ್ ಹೃದಯಾಘಾತದಿಂದ ಸಾವು*

ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಯುವ ಜನತೆಯಲ್ಲಿ ಹೃದಯಾಘಾತ ಸಂಭವಿಸುತ್ತಿರುವ ಘಟನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ತರಬೇತಿಗೆಂದು ಬಂದಿದ್ದ 19 ವರ್ಷದ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಂಗಳೂರಿನ ಜೆ.ಪಿ.ನಗರದ ತನ್ನ ರೂಮ್ ನಲ್ಲಿಯೇ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದದನೆ. ನಿಶಾಂತ್ ಮೃತ ಯುವಕ.
ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದ ನಿವಾಸಿಯಾಗಿರುವ ನಿಶಾಂತ್, ಕೈಗಾರಿಕಾ ತರಬೇತಿಗೆಂದು ಬೆಂಗಳೂರಿಗೆ ಬಂದಿದ್ದ. ಜೆ.ಪಿನಗರದಲ್ಲಿ ರೂಂ ಮಾಡಿಕೊಂಡು ವಾಸವಾಗಿದ್ದ. ಆರೋಗ್ಯವಾಗಿಯೇ ಇದ್ದ ಯುವಕ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.



