Kannada NewsKarnataka NewsLatest

*ಯುವಜನತೆಗೆ ಭರ್ಜರಿ ಗುಡ್ ನ್ಯೂಸ್; ಯುವನಿಧಿ ಯೋಜನೆ ಜಾರಿಗೆ ಕ್ಷಣಗಣನೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಕಾಂಗ್ರೆಸ್ ಸರ್ಕಾರದ 5ನೇ ಗ್ಯಾರಂಟಿ ಯೋಜನೆ ಮಹತ್ವಾಕಾಂಕ್ಷಿ ಯುವನಿಧಿ ಯೋಜನೆ ಜಾರಿಗೆ ಕ್ಷಣ ಗಣನೆ ಆರ‍ಂಭವಾಗಿದೆ. ಇಂದು ಈ ಮಹತ್ವದ ಯೋಜನೆ ಜಾರಿಯಾಗಲಿದೆ.

ವಿವೇಕಾನಂದ ಜಯಂತಿಯಂದೇ ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಯುವನಿಧಿ ಯೋಜನೆಗೆ ಚಾಲನೆ ನೀಡಲಿರುವುದು ವಿಶೇಷ. ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿರುವ ಕಾಂಗ್ರೆಸ್ ಸರ್ಕಾರ ಇದೀಗ ಐದನೇ ಗ್ಯಾರಂಟಿ ಜಾರಿಗೆ ತರುತ್ತಿದೆ.

ಆನ್ ಲೈನ್ ಮೂಲಕ ಈಗಾಗಲೇ 65 ಸಾವಿರ ಡಿಪ್ಲೋಮಾ ಹಾಗೂ ಪದವೀಧದರು ನೋಂದಣಿ ಮಾಡಿಕೊಂಡಿದ್ದು, ಅವರ ಖಾತೆಗೆ ಇಂದು ಹಣ ಜಮಾ ಆಗಲಿದೆ. ಪದವೀಧರರಿಗೆ ಮಾಸಿಕ 3000 ಹಾಗೂ ಡಿಪ್ಲೋಮಾ ಪದವೀಧರರಿಗೆ 1500 ರೂ ಈ ಯೋಜನೆಯಡಿ ಸಿಗಲಿದೆ.

Related Articles

Back to top button