Latest

ಘಟಪ್ರಭ ರೈಲು ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳಿಗೆ ಸುರೇಶ ಅಂಗಡಿ ಶಂಕುಸ್ಥಾಪನೆ

   

Home add -Advt

   ಪ್ರಗತಿವಾಹಿನಿ ಸುದ್ದಿ, ಘಟಪ್ರಭ

ಘಟಪ್ರಭ ರೈಲು ನಿಲ್ದಾಣದ ನೂತನ ಕಟ್ಟಡ ಮತ್ತು ರೈಲ್ವೆ ಮೇಲ್ಸೆತುವೆ ಕಾಮಗಾರಿಗಳಿಗೆ ಸಂಸದ ಸುರೇಶ ಅಂಗಡಿ ಶಂಕುಸ್ಥಾಪನೆ ನೆರವೇರಿಸಿದರು. 

ಸುಮಾರು 4.2 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಸರಾಸರಿ 4,291 ಜನರು ಘಟಪ್ರಭಾ ರೈಲ್ವೆ ನಿಲ್ದಾಣದ ಸೌಲಭ್ಯ ಪಡೆಯುತ್ತಿದ್ದಾರೆ. ಘಟಪ್ರಭಾ ಸಗಟು ತರಕಾರಿ ಮಾರುಕಟ್ಟೆಗೆ ಹೆಸರಾಗಿದ್ದು, ಕರ್ನಾಟಕವಷ್ಟೆ ಅಲ್ಲದೆ ಗೋವಾ, ಮಹಾರಾಷ್ಟ್ರಗಳಿಗೂ ತರಕಾರಿ ಸಾಗಣೆಯಾಗುತ್ತದೆ. ಹಾಗಾಗಿ ಇದೊಂದು ಪ್ರಮುಖ ವ್ಯವಸಾಯೋತ್ಪನ್ನ ಹಾಗೂ ತರಕಾರಿ ಮಾರುಕಟ್ಟೆಯ ವಾಣಿಜ್ಯ ಕೇಂದ್ವೆಂದು ಪ್ರಸಿದ್ಧಿಯಾಗಿದೆ.

ಹಾಗಾಗಿ ರೈಲ್ವೆ ಇಲಾಖೆ ಇಲ್ಲಿ ಹೆಚ್ಚುನ ಸೌಲಭ್ಯ ಒದಗಿಸಲು ಮುಂದಾಗಿದೆ. 

Related Articles

Back to top button