Latest

ಧಾರವಾಡಕ್ಕೆ ಸಿಎಂ ಆಗಮನ; ಮೃತರ ಸಂಖ್ಯೆ ಮುಚ್ಚಿ ಹಾಕಲಾಗುತ್ತಿದೆಯೇ?

ಪ್ರಗತಿವಾಹಿನಿ ಸುದ್ದಿ, ಧಾರವಾಡ

ಧಾರವಾಡದಲ್ಲಿ ಕಟ್ಟಡ ಕುಸಿತ ಪ್ರಕರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗಮಿಸಿದ್ದಾರೆ. 

Home add -Advt

ಘಟನೆ ನಡೆದ ಸ್ಥಳ ಮತ್ತು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಜಿಲ್ಲಾ ಆಸ್ಪತ್ರೆಗೆ ಅವರು ಭೇಟಿ ನೀಡುತ್ತಿದ್ದಾರೆ.

ಧಾರವಾಡ ಘಟನೆಯಲ್ಲಿ ಮೃತರ ಸಂಖ್ಯೆ 13 ಎಂದು ಅಧಿಕೃತವಾಗಿ ಪ್ರಕಟಿಸಲಾಗಿದೆ. ಆದರೆ ಹತ್ತಿರದಿಂದ ಘಟನೆಯನ್ನು ವೀಕ್ಷಿಸುತ್ತಿರುವವರ ಪ್ರಕಾರ ಸಾವಿಗೀಡಾದವರ ಸಂಖ್ಯೆ ಇದನ್ನು ಮೀರಿದೆ. ಅಂಬುಲೆನ್ಸ್ ನಲ್ಲಿ ಹೇರಿಕೊಂಡು ಹೋಗುತ್ತಿರುವವರ ಸಂಖ್ಯೆ ನೋಡಿದರೆ ಯಾರು ಗಾಯಾಳುಗಳು, ಯಾರು ಮೃತಪಟ್ಟಿದ್ದಾರೆ ಎನ್ನುವುದನ್ನು ಹೇಳುವುದು ಕಷ್ಟ. ರಾಜಕೀಯ ಒತ್ತಡದಿಂದಾಗಿ ಮೃತರ ಸಂಖ್ಯೆಯನ್ನು ಮುಚ್ಚಿಡಲಾಗುತ್ತಿದೆ ಎಂದು ಅನಿಸುತ್ತಿದೆ ಎಂದು ಸ್ಥಳೀಯರೊಬ್ಬರು ಪ್ರಗತಿವಾಹಿನಿಗೆ ತಿಳಿಸಿದ್ದಾರೆ.

ಕಟ್ಟಡ ಬೇನಾಮಿ ಹೆಸರಲ್ಲಿ ನಿರ್ಮಾಣವಾಗಿತ್ತು. ನಿಜವಾದ ಮಾಲಿಕರು ಪ್ರಭಾವಿ ರಾಜಕಾರಣಿ. ಪೊಲೀಸರ ಮೇಲೆ ಒತ್ತಡ ಹೇರಿ ನಿಜ ಸಂಗತಿಯನ್ನು ಹೊರಗೆಡವಲು ಕೊಡುತ್ತಿಲ್ಲ ಎನ್ನಲಾಗುತ್ತಿದೆ. 

Related Articles

Back to top button