Latest

ಬಾಲಕರಿಬ್ಬರು ನಾಪತ್ತೆ


ಪ್ರಗತಿವಾಹಿನಿ ಸುದ್ದಿ, ಪರಮಾನಂದವಾಡಿ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮದಿಂದ ಇಬ್ಬರು ಬಾಲಕರು  ಕಾಣೆಯಾಗಿದ್ದಾರೆ.

Home add -Advt

ಆಕಾಶ ಅಲ್ಲಪ್ಪ ತೆಳಗಡೆ, ವಯಸ್ಸು ೧೬, ಕಂದು ಬಣ್ಣ, ಎತ್ತರ ೫.೪ ಅಡಿ, ಸಾಧಾರಣ ಮೈಕಟ್ಟು, ಕನ್ನಡ ಭಾಷೆಯನ್ನು ಮಾತ್ರ ಮಾತನಾಡುತ್ತಾನೆ. ಇನ್ನೋರ್ವ ಚಿರಂಜೀವಿ ಮಹಾವೀರ ದೇವಋಷಿ, ವಯಸ್ಸು ೧೬, ಸಾಧಾರಣ ಕಂದು ಬಣ್ಣ, ಎತ್ತರ ೫.೪ ಅಡಿ, ದಪ್ಪಗಿನ ಮೈಕಟ್ಟು ಪೋಟೊದಲ್ಲಿರುವ ಶರ್ಟ ಹಾಕಿದ್ದಾನೆ. ಕನ್ನಡ ಭಾಷೆಯನ್ನು ಮಾತ್ರ ಮಾತನಾಡುತ್ತಾನೆ. ಈತನು ಚಿಕ್ಕೋಡಿ ತಾಲೂಕಿನ ಬಸವನಾಳ ಗಡ್ಡೆ ಗ್ರಾಮದವನು.

ಈ ಇಬ್ಬರು ಹುಡಗರು ಏಪ್ರಿಲ್ 30ರಂದು ನಾಪತ್ತೆಯಾಗಿದ್ದಾರೆ. ಈ ಇಬ್ಬರ ಮಕ್ಕಳ ಬಗ್ಗೆ ಸುಳಿವು ಸಿಕ್ಕಲ್ಲಿ ಹತ್ತಿರದ ಪೋಲಿಸ ಠಾಣೆಗೆ ಮತ್ತು ಈ ಕೆಳಗಿನ ಮೊಬೈಲ್ ಗೆ ಕರೆ ಮಾಡಲು ಕೋರಲಾಗಿದೆ. 
ಮೋ. ೯೪೪೯೩೦೯೩೫೨, ೯೯೧೬೬೨೭೮೪೯, ೯೮೮೬೯೧೨೧೯೮, ೯೫೯೦೯೭೬೫೩೮

 

Related Articles

Back to top button