Latest

ಮುನಿಸಿಕೊಂಡ ಡಾ.ಸುಧಾಕರ: ಸರಕಾರಕ್ಕೆ ಮತ್ತೆ ಸಂಕಷ್ಟ

 

   

     ಪ್ರಗತಿವಾಹಿನಿ ಸುದ್ದಿ, ಚಿಕ್ಕಬಳ್ಳಾಪುರ

ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಿ, ಹಿಂತೆಗೆದುಕೊಂಡಿರುವುದಕ್ಕೆ ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ ತೀವ್ರ ಅಸಮಾಧಾನಗೊಂಡಿದ್ದು, 2-3 ದಿನದಲ್ಲಿ ತಮ್ಮ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.

Home add -Advt

ಮಂತ್ರಿಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಸುಧಾಕರ ಅವರನ್ನು ಸಮಾಧಾನಪಡಿಸುವ ಉದ್ಧೇಶದಿಂದ ಮಾಲಿನ್ಯ ನಿಯಂತ್ರಣ ಮಂಡಳಿ ಚೇರಮನ್ ಹುದ್ದೆ ನೀಡಲು ನಿರ್ಧರಿಸಲಾಗಿತ್ತು. ಆದರೆ ಅವರು ಅಧಿಕಾರ ಸ್ವಾಕರಿಸುವ ಮುನ್ನವೇ ಅದನ್ನು ಕಸಿದುಕೊಳ್ಳಲಾಗಿದೆ.

ನನಗೆ ಹುದ್ದೆ ನೀಡುವುದು ಪಕ್ಷದ ತೀರ್ಮಾನವಾಗಿತ್ತು. ಆದರೆ ಮುಖ್ಯಮಂತ್ರಿಗಳು ಅದನ್ನು ಹಿಂದೆ ಪಡೆದಿದ್ದಾರೆ. ಅವರು ಮೈತ್ರಿ ನಿಯಮ ಪಾಲಿಸಲಿಲ್ಲ. ಈ ರೀತಿ ಅವರು ಮಾಡಿದ್ದೇಕೆ ಎನ್ನುವುದನ್ನು ನಾನು ಪಕ್ಷದ ವರಿಷ್ಠರಲ್ಲೂ ವಿಚಾರಿಸುತ್ತೇನೆ. ಮುಖ್ಯಮಂತ್ರಿಗಳನ್ನೂ ಕೇಳುತ್ತೇನೆ. ನಂತರ ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಪ್ರಕಟಿಸುತ್ತೇನೆ ಎಂದಿದ್ದಾರೆ ಅವರು. 

ಮಾಜಿ ಸಚಿವ ರಮೇಶ ಜಾರಕಿಹೊಳಿ ಕೈಗ ಸಿಗದೆ ಆತಂಕ ಸೃಷ್ಟಿಸಿರುವ ಮಧ್ಯೆಯೇ ಸುಧಾಕರ ಕೂಡ ಬೆದರಿಕೆ ಹಾಕಿರುವುದು ಸರಕಾರಕ್ಕೆ ತಲೆನೋವಾಗಿದೆ. ಅಸಮಾಧಾನಗೊಂಡಿರುವವರೆಲ್ಲ ಸೇರಿ ಯಾವ ರೀತಿಯ ಯೋಜನೆ ರೂಪಿಸುತ್ತಿದ್ದಾರೆ ಎನ್ನುವುದು ತಿಳಿಯದೆ ಕಾಂಗ್ರೆಸ್, ಜೆಡಿಎಸ್ ನಾಯಕರು ತಲೆಕೆಡಿಸಿಕೊಂಡಿದ್ದಾರೆ.

 

Related Articles

Back to top button