Latest

ಐಪಿಎಲ್ ಉದ್ಘಾಟನೆ ಸಮಾರಂಭದ ಹಣ ಯೋಧರ ಕುಟುಂಬಗಳಿಗೆ

ಪ್ರಗತಿವಾಹಿನಿ ಸುದ್ದಿ, ಮುಂಬೈ

ಪುಲ್ವಾಮಾ ದಾಳಿ ಶೋಕಾಚರಣೆ ಹಿನ್ನೆಲೆಯಲ್ಲಿ ಐಪಿಎಲ್ ಟೂರ್ನಿಯ ಉದ್ಘಾಟನೆ ಸಮಾರಂಭವನ್ನು ಅದ್ಧೂರಿಯಾಗಿ ನಡೆಸದಿರಲು ಬಿಸಿಸಿಐ ನಿರ್ಧರಿಸಿದೆ. ಜೊತೆಗೆ, ಉದ್ಘಾಟನೆ ಸಮಾರಂಭಕ್ಕೆ ಖರ್ಚು ಮಾಡಲಾಗುತ್ತಿದ್ದ ಹಣವನ್ನು ಪುಲ್ವಾಮಾ ಯೋಧರ ಕುಟುಂಬಗಳಿಗೆ ನೀಡಲು ನಿರ್ಧರಿಸಲಾಗಿದೆ.

ಬಿಸಿಸಿಐ ಆಡಳಿತ ಸಮಿತಿ ಈ ಕುರಿತು ನಿರ್ಧಾರ ತೆಗೆದುಕೊಂಡಿದ್ದು, ಪುಲ್ಮಾಮಾ ದಾಳಿ ನಡೆದ ಶೋಕದ ಈ ಸಂದರ್ಭದಲ್ಲಿ ಅದ್ಧೂರಿಯ ಉದ್ಘಾಟನೆ ಸರಿಯಲ್ಲ. ಹಾಗಾಗಿ ಅದ್ಧೂರು ಉದ್ಘಾಟನೆ ನಡೆಸದೆ ಆ ಹಣವನ್ನು ಯೋಧರ ಕುಟುಂಬಗಳಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದೆ.

 

Home add -Advt

Related Articles

Back to top button