ಪ್ರಗತಿವಾಹಿನಿ Exclusive
ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಜಾಗ ಗುರುತಿಸುವುದಕ್ಕೆ ಆದೇಶಿಸಿದ ರೇವಣ್ಣ
ಸಧ್ಯಕ್ಕೆ 900 ಕೋಟಿ ರೂ. ನೀಡುವುದಾಗಿ ಭರವಸೆ
ಎಂ.ಕೆ.ಹೆಗಡೆ, ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಭಜನೆಗೆ ಸರಕಾರ ದೃಢ ನಿರ್ಧಾರ ಮಾಡಿದ್ದು, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಈ ಸಂಬಂಧ ಜಾಗ ಗುರುತಿಸುವಂತೆ ಗುರುವಾರ ಹಾಸನ ಜಿಲ್ಲಾಧಿಕಾರಿಗೆ ಆದೇಶಿಸಿದ್ದಾರೆ.
ವಿಧಾನಮಂಡಳದ ಅಧಿವೇಶನ ಬಿಟ್ಟು ಗುರುವಾರ ಹಾಸನಕ್ಕೆ ತೆರಳಿದ್ದ ರೇವಣ್ಣ ಅಲ್ಲಿ ಜಿಲ್ಲಾಧಿಕಾರಿಗಳ ಸಭೆ ನಡೆಸಿದ್ದಾರೆ. ವಿಟಿಯು ವಿಭಜನೆ ನಿಶ್ಚಿತ. ಯಾರು ಏನೇ ಹೇಳಿದರೂ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಬಜೆಟ್ ಗೆ ರಾಜ್ಯಪಾಲರು ಸಹಿ ಹಾಕಲಿದ್ದು, ಅದೇ ಅಂತಿಮ ಎಂದು ರೇವಣ್ಣ ಹೇಳಿದ್ದಾರೆ.
ಜಿಲ್ಲಾಧಿಕಾರಿಗಳೊಂದಿಗೆ ಈ ಸಂಬಂಧ ಸುದೀರ್ಘ ಚರ್ಚೆ ನಡೆಸಿದ ರೇವಣ್ಣ, ವಿಟಿಯು ಹೊಸ ಕಟ್ಟಡಕ್ಕಾಗಿ ಲೋಕೋಪಯೋಗಿ ಇಲಾಖೆಯಿಂದ 500 ಕೋಟಿ ರೂ. ತಕ್ಷಣ ಬಿಡುಗಡೆ ಮಾಡಲಾಗುವುದು. ಬೆಳಗಾವಿ ವಿಟಿಯುದಲ್ಲಿ 470 ಕೋಟಿ ರೂ. ಇದ್ದು, ಅದರಲ್ಲಿ 400 ಕೋಟಿ ರೂ.ಗಳನ್ನು ತರಿಸಲಾಗುವುದು. ಸಧ್ಯಕ್ಕೆ 900 ಕೋಟಿ ರೂ. ವೆಚ್ಚದಲ್ಲಿ ಕೆಲಸ ಆರಂಭಿಸಿದ ಎಂದು ಆದೇಶಿಸಿದ್ದಾರೆ.
ಇದೇ ವೇಳೆ ಆಪ್ತರಾದ ವಿಧಾನಪರಿಷತ್ ಸದಸ್ಯರೊಬ್ಬರೊಂದಿಗೆ ಮಾತನಾಡಿದ ರೇವಣ್ಣ, ವಿಟಿಯು ವಿಭಜಿಸಿ ಹಾಸನದಲ್ಲಿ ಮತ್ತೊಂದು ವಿಶ್ವವಿದ್ಯಾಲಯ ಆರಂಭಿಸುವುದು ಸರಕಾರದ ದೃಢ ನಿರ್ಧಾರ ಯಾರು ಏನೇ ಹೇಳಿದರೂ ಅದನ್ನು ಕೈ ಬಿಡುವ ಪ್ರಶ್ನೆ ಇಲ್ಲ. ಉತ್ತರ ಕರ್ನಾಟಕದವರು ಪ್ರತಿಭಟಿಸುತ್ತಾರೆಂದು ಕೈ ಬಿಡುವುದಿಲ್ಲ ಎಂದು ರೇವಣ್ಣ ಹೇಳಿದ್ದಾರೆ.
ಕೈ ಬಿಡುವುದಾಗಿ ಹೇಳಿದ್ದ ಸಿಎಂ:
ವಿಟಿಯು ವಿಭಜಿಸುವುದಾಗಿ ಬಜೆಟ್ ಭಾಷಣದ ವೇಳೆ ಘೋಷಿಸಿದ್ದ ಸಿಎಂ, ನಂತರ ಈ ಭಾಗದ ಕೆಲವು ಸಚಿವರು, ಶಾಸಕರು ತಮ್ಮನ್ನು ಭೇಟಿಯಾದಾಗ ನಿರ್ಧಾರ ಕೈ ಬಿಡುವುದಾಗಿ ಹೇಳಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದರು.
ಕೆಲವರು ತಪ್ಪು ಕಲ್ಪನೆ ನೀಡಿದ್ದರಿಂದ ವಿಟಿಯು ವಿಭಜನೆಗೆ ನಿರ್ಧರಿಸಲಾಗಿತ್ತು. ಆದರೆ ಅದನ್ನು ಕೈ ಬಿಡಲಾಗುವುದು ಎಂದಿದ್ದಾರೆ ಎಂದು ಸತೀಶ್ ಪ್ರಗತಿವಾಹಿನಿಗೆ ತಿಳಿಸಿದ್ದರು.
ಶಾಸಕ ಅಭಯ ಪಾಟೀಲ ಕೂಡ ಸುಮಾರ 50 ಶಾಸಕರ ಸಹಿಯ ಪತ್ರ ನೀಡಿದಾಗ, ಹಾಸನದಲ್ಲಿ ಕೇವಲ ಮತ್ತೊಂದು ಪ್ರಾದೇಶಿಕ ಕೇಂದ್ರ ಆರಂಭಿಸಲಾಗುವುದು. ವಿಟಿಯು ವಿಭಜಿಸುವುದಿಲ್ಲ ಎಂದು ಸಿಎಂ ಭರವಸೆ ನೀಡಿದ್ದರು.
ಆದರೆ ಈ ಕುರಿತು ವಿಧಾನ ಸಭೆಯಲ್ಲಿ ಯಾವುದೇ ಘೋಷಣೆ ಮಾಡಿಲ್ಲ. ಚರ್ಚೆಯೇ ಇಲ್ಲದೆ ಬಜೆಟ್ ಅಂಗೀಕಾರವಾಗಿದ್ದು, ರಾಜ್ಯಪಾಲರ ಸಹಿಗೆ ಕಳುಹಿಸಲಾಗಿದೆ.
ಸಂಸದರಾದ ಪ್ರಭಾಕರ ಕೋರೆ, ಸುರೇಶ ಅಂಗಡಿ ಸರಕಾರದ ನಿರ್ಧಾರವನ್ನು ಖಂಡಿಸಿದ್ದರು. ವಿಧಾನ ಪರಿಷತ್ ಸದಸ್ಯ ಮಹಂತೇಶ ಕವಟಗಿಮಠ ವಿಧಾನ ಪರಿಷತ್ತಿನಲ್ಲಿ ಈ ಬಗ್ಗೆ ಪ್ರಶ್ನೆ ಮಾಡಿದ್ದರು.
ವಿಟಿಯು ವಿಭಜಿಸಬಾರದೆಂದು ಬೆಳಗಾವಿಯಲ್ಲಿ ಕಳೆದ ಒಂದು ವಾರದಿಂದಪ್ರತಿಭಟನೆ ನಡೆಸುತ್ತಿದ್ದು, ಶನಿವಾರ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಲಿದೆ.
ಬೆಳಗಾವಿಯ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಎಚ್ಚೆತ್ತುಕೊಂಡು ಹೋರಾಟಕ್ಕಿಳಿಯಬೇಕಿದೆ. ಶನಿವಾರ ಆಯೋಜಿಸಿರುವ ಪ್ರತಿಭಟನಾ ರ್ಯಾಲಿಯಲ್ಲಿ ಪಕ್ಷಾತೀತವಾಗಿ ಎಲ್ಲ ಭಾಗವಹಿಸಿ, ಸರಕಾರಕ್ಕೆ ಉಗ್ರ ಸಂದೇಶ ನೀಡಬೇಕಿದೆ.
ಪ್ರಗತಿವಾಹಿನಿ ಆರಂಭದಿಂದಲೂ ವಿಟಿಯು ವಿಭಜನ ವಿರುದ್ಧ ಧ್ವನಿ ಎತ್ತಿ ಸರಣಿ ಬರಹ ಪ್ರಕಟಿಸಿರುವುದು ಇಲ್ಲಿ ಉಲ್ಲೇಖನೀಯ.
ಈಗಲೂ ಪ್ರತಿಭಟಿಸದಿದ್ದರೆ ಬೆಳಗಾವಿಯನ್ನೇ ಎತ್ತಿಕೊಂಡು ಹೋದಾರು
ವಿಟಿಯು ವಿಭಜನೆ ವಿರೋಧಿಸಿ ಹೋರಾಟಕ್ಕೆ ಸ್ವಾಭಿಮಾನಿ ಬೆಳಗಾವಿಗರು ಸಜ್ಜು
ವಿಟಿಯು ವಿಭಜನೆಗೆ ಮುಂದಾಗಿರುವುದು ಅಪಾಯದ ಬೆಳವಣಿಗೆ- ಕಾಶಿ ಜಗದ್ಗುರು
ಸರಕಾರವೇ ರಾಜ್ಯ ಒಡೆಯಲು ಹೊರಟಂತಿದೆ -ಕೋರೆ ಆಕ್ರೋಶ
ನಾಳೆಯೇ ಜನಪ್ರತಿನಿಧಿಗಳ ಸಭೆ ಕರೆಯುತ್ತೇನೆ -ಅಂಗಡಿ
ವಿಟಿಯು ಉಳಿಸಿ: ಶನಿವಾರ ಬೆಳಗಾವಿಯಲ್ಲಿ ಬೃಹತ್ ಜಾಥಾ
ಸೇವ್ ವಿಟಿಯು: ಚಿಕ್ಕೋಡಿಯಲ್ಲಿ ಕನಪ ಪ್ರತಿಭಟನೆ
ಸೇವ್ ವಿಟಿಯು: ಗುರುವಾರ ಸಂಜೆ ಸಂಘ-ಸಂಸ್ಥೆಗಳ ಪೂರ್ವಭಾವಿ ಸಭೆ
ವಿಟಿಯು ವಿಭಜನೆ ಕೈಬಿಡುವುದಾಗಿ ಸಿಎಂ ಭರವಸೆ -ಸತೀಶ್ ಜಾರಕಿಹೊಳಿ
ಸೇವ್ ವಿಟಿಯು: ಬೆಂಗಳೂರಿನಲ್ಲಿ ಸಭೆ ನಡೆಸಿದ ಸಚಿವರು, ಶಾಸಕರು
ಸೇವ್ ವಿಟಿಯು: ಸಿಎಂಗೆ ನಾಳೆ ಅಭಯ ಪಾಟೀಲ ಸಲ್ಲಿಸುವ ಪತ್ರದಲ್ಲೇನಿದೆ?
ವಿಟಿಯು ಇಬ್ಬಾಗಿಸದಂತೆ ಒತ್ತಾಯಸಿ ಕರ್ನಾಟಕ ನವ ನಿರ್ಮಾಣ ಪಡೆ ಪ್ರತಿಭಟನೆ
ವಿಟಿಯು ವಿಭಜನೆಗೆ ಹಣಮಂತ ನಿರಾಣಿ ವಿರೋಧ
ವಿಟಿಯು ವಿಭಜನೆ ವಿರೋಧಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಸೇವ್ ವಿಟಿಯು: ಅಭಯ ಪಾಟೀಲ ಸಹಿ ಆಂದೋಲನ; 23 ಶಾಸಕರ ಸಹಿ
ಬೆಳಗಾವಿಯಲ್ಲಿ ವಿಟಿಯು ಉಳಿಸಿ ಹೋರಾಟ ಆರಂಭ
ವಿಟಿಯು ವಿಭಜನೆ ನಿರ್ಧಾರ ಹಿಂದಕ್ಕೆ ಪಡೆಯಿರಿ -ಟೋಪಣ್ಣವರ್
ವಿಟಿಯು ಒಡೆಯುವುದಾದರೆ ರಾಜ್ಯವನ್ನೇ ಒಡೆಯಿರಿ
ಸೇವ್ ವಿಟಿಯು:ನಾಳೆ ಬೃಹತ್ ಪ್ರತಿಭಟನಾ ಸಭೆ; ಪ್ರಗತಿವಾಹಿನಿ ಇಂಪ್ಯಾಕ್ಟ್
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ ಶೇರ್ ಮಾಡಿರಿ)