Latest

ರಜೆಯ ಮೇಲೆ ಬಂದಿದ್ದ ಯೋಧ ಅಪಘಾತಕ್ಕೆ ಬಲಿ

    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ರಜೆಯ ಮೇಲೆ ಊರಿಗೆ ಬಂದಿದ್ದ ಯೋಧ ನಾಗರಮುನ್ನೋಳಿ ಬಳಿ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ.
ಸಿಕಂದರ್ ಮುಲ್ತಾನಿ (28) ಸಾವಿಗೀಡಾದವರು. ಟ್ರಾಕ್ಟರ್ ಹಿಂಬದಿಗೆ ಬೈಕ್ ಡಿಕ್ಕಿಯಾಗಿ ಮುಲ್ತಾನಿ ಸ್ಥಳದಲ್ಲೆ ಸಾವಿಗೀಡಾದರು.
ಕಳೆದ 9 ವರ್ಷಗಳಿಂದ ಪಂಜಾಬಿನ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ಆಫ್ ಸೆಂಟರ್ ನಲ್ಲಿ  ಸೇವೆ ಸಲ್ಲಿಸುತ್ತಿದ್ದರು. 
40 ದಿನ ರಜೆ ಪಡೆದು ಸಿಕಂದರ್ ಮುಲ್ತಾನಿ ಊರಿಗೆ ಬಂದಿದ್ದರು. ಚಿಕ್ಕೋಡಿ ತಾಲೂಕಿ ನಾಗರಮುನ್ನೋಳಿ ಗ್ರಾಮಕ್ಕೆ ಹೊಂದಿರುವ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ ಮೇಲೆ ಘಟನೆ ನಡೆದಿದೆ.
ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Back to top button