Latest

ಮಂಗಳವಾರ ಪ್ರಶಸ್ತಿ ಪ್ರದಾನ, ವಿವಿಧ ಕಾರ್ಯಕ್ರಮ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಲಿಂಗಾಯತ ಸ್ವತಂತ್ರ ಧರ್ಮದ ಬಗ್ಗೆ ಡಾ. ನಾಗಮೋಹನ ದಾಸ್ ಸಮಿತಿಯು ವರದಿ ನೀಡಿ ಮಾರ್ಚ 19 ಕ್ಕೆ ಒಂದು ವರ್ಷ ಸಂದಿರುವ ಪ್ರಯುಕ್ತ ಬಸವ ಭೀಮ ಸೇನೆಯ ವತಿಯಿಂದ ಮಾರ್ಚ 19 ರಂದು ಬೆಳಿಗ್ಗೆ 10.30 ಕ್ಕೆ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ವರದಿಯ ವಾರ್ಷಿಕೋತ್ಸವ, ವರದಿ ನೀಡಿರುವ ಸಪ್ತರ್ಷಿಗಳಿಗೆ ಅಭಿನಂದನೆ ಹಾಗೂ ಬಸವಾದಿ ಶರಣರ ಸ್ಮರಣಾರ್ಥ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ.
ನೇಗಿನಹಾಳದ ಶ್ರೀ ಮಡಿವಾಳೇಶ್ವರ ಮಠದ ಶ್ರೀ ಬಸವ ಸಿದ್ದಲಿಂಗ ಶ್ರೀಗಳು ಮತ್ತು ಕಲಬುರಗಿಯ ಅಕ್ಕಮಹಾದೇವಿ ಆಶ್ರಮದ  ಪ್ರಭುಶ್ರೀ ತಾಯಿ ಸಾನಿಧ್ಯ ವಹಿಸುವರು.
ಮಾನವ ಬಂಧುತ್ವ ವೇದಿಕೆಯ ರಾಜ್ಯಾಧ್ಯಕ್ಷ ರವೀಂದ್ರ ನಾಯ್ಕರ ಉದ್ಘಾಟಿಸುವರು.
ಕನ್ನಡದ ಹಿರಿಯ ಹೋರಾಟಗಾರ ಸಿದ್ದನಗೌಡ ಪಾಟೀಲ, ಬಸವ ಪ್ರತಿಷ್ಠಾನದ ಅಧ್ಯಕ್ಷ  ಬಸವರಾಜ ರೊಟ್ಟಿ, ರಾಷ್ಟ್ರೀಯ ಬಸವ ಸೇನೆಯ ಅಧ್ಯಕ್ಷ ಶಂಕರ ಗುಡಸ್, ಜನಪರ ಹೋರಾಟಗಾರ ಅರವಿಂದ ದಳವಾಯಿ, ಶಿವಮೊಗ್ಗದ ಬಸವಾಭಿಮಾನಿ ಹೇಮಂತ ಶೆಟ್ಟರ್, ಸಾಮಾಜಿಕ ಕಾರ್ಯಕರ್ತ ಸುರೇಶ ತಳವಾರ, ಬಾಗಲಕೋಟೆಯ ಶ್ರೀ ಸಿದ್ದರಾಮೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಲರಾಮ ನಾಯ್ಕ ಮತ್ತು ಕರ್ನಾಟಕ ಮಾಧ್ಯಮಿಕ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ರಾಮು ಗುಗವಾಡ ಮುಖ್ಯ ಅತಿಥಿಗಳಾಗಿರುವರು.
ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಅರವಿಂದ ಪರುಶೆಟ್ಟಿ ಅಧ್ಯಕ್ಷತೆ ವಹಿಸುವರು ಎಂದು ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಿಂಗಾಯತ ಸ್ವತಂತ್ರ ಧರ್ಮದ ವರದಿಯ ವಾರ್ಷಿಕೋತ್ಸವದ ನಿಮಿತ್ಯ ಬಸವ ಭೀಮ ಸೇನೆಯ ವತಿಯಿಂದ ಆಯೋಜಿಸಲಾಗಿರುವ ವಿಜಯೋತ್ಸವದ ಪ್ರಯುಕ್ತ ಘೋಷಿಸಲಾಗಿದ್ದ ಬಸವಾದಿ ಶರಣರ ಸ್ಮರಣಾರ್ಥ ಪ್ರಶಸ್ತಿಗಳ ಸಾಧಕರ ಹೆಸರುಗಳನ್ನು ಪ್ರಕಟಿಸಲಾಗಿದೆ.
ಬಸವ ಚೇತನ ಪ್ರಶಸ್ತಿ: ಅಂದಾನಯ್ಯ ಅಳಗುಂಡಿ, ಶರಣ ಸಾಹಿತಿಗಳು, ಬೆಳಗಾವಿ ಹಾಗೂ ಶಿ.ಗು.ಕುಸುಗಲ್, ಹಿರಿಯ ಸಾಹಿತಿಗಳು, ಬೆಳಗಾವಿ.
ಮಹಾತಾಯಿ ಕಲ್ಯಾಣಮ್ಮ ಪ್ರಶಸ್ತಿ:  ಶಾಂತಾದೇವಿ ಹುಲೆಪ್ಪನವರಮಠ, ಹಿರಿಯ ಸಾಮಾಜಿಕ ಕಾರ್ಯಕರ್ತರು, ಬೆಳಗಾವಿ,  ತುಳಸಮ್ಮ ಕೆಲೂರ, ಜ್ಞಾನಸಿಂಧು ಅಂಧ ಮಕ್ಕಳ ಶಾಲೆ, ಗದಗ,
ಶಾಲಿನಿ ದೊಡಮನಿ, ಹಿರಿಯ ಸಾಹಿತಿಗಳು, ಉಗಾರಖುರ್ದ, ಯಮುನವ್ವ ಲಿಂಗನೂರಿ, ಹಿರಿಯ ಸಮಾಜ ಸೇವಕರು, ಹುಕ್ಕೇರಿ, ಮಾಲತಿ ಆಶ್ರೀತ, ಮಕ್ಕಳ ಮನೆ, ಮೂಡಲಗಿ, ಕಸ್ತೂರಿ ಬಾವಿ, ಕನ್ನಡದ ಹಿರಿಯ ಹೋರಾಟಗಾರರು, ಬೆಳಗಾವಿ, ನಾರಿಕುಲ ಚೇತನ ಅಕ್ಕಮಹಾದೇವಿ, ಪ್ರಭುಶ್ರೀ ತಾಯಿ, ಅಕ್ಕಮಹಾದೇವಿ ಆಶ್ರಮ, ಕಲಬುರ್ಗಿ, ರಾಜಶ್ರೀ ಮಲ್ಲಿನಾಥ ಥಳಂಗೆ, ಸೊಲ್ಲಾಪುರ, ಮಹಾರಾಷ್ಟ್ರ, ಸುಮತಿ ಜಯಪ್ಪ ದಾವಣಗೇರೆ, ಸಾಕ್ಷರ ತಾಯಿ ಅಕ್ಕಮಹಾದೇವಿ ಶಕುಂತಲಾ ಕಮತೆ, ಕಾರದಗಾ, ಚಿಕ್ಕೋಡಿ, ಶಕುಂತಲಾ ಹೂಗಾರ, ಮರಾಠಿ ಶಾಲೆಯ ಕನ್ನಡ ಶಿಕ್ಷಕಿ, ಬೆಳಗಾವಿ, ಗಿರಿಜಾ ಹಸಬಿ, ಪಾವಟೆ ಮಹಾವಿದ್ಯಾಲಯ, ಗದಗ,
ಯುವ ಚೇತನ ಚನ್ನಬಸವಣ್ಣ ಪ್ರಶಸ್ತಿ: ಸಂಗಮೇಶ ಜವಾದಿ, ಶರಣ ಯುವ ಸಾಹಿತಿ, ಬೀದರ ಜಿಲ್ಲೆ,  ರವಿಕಾಂತ ಅಂಗಡಿ, ಅಧ್ಯಕ್ಷರು, ಕಪ್ಪತಗುಡ್ಡ ಉಳಿಸಿ ಹೋರಾಟ ಸಮಿತಿ ಗದಗ, ಮಹಾಂತೇಶ ತೋರಣಗಟ್ಟಿ, ಸಂಚಾರಿ ಗುರುಬಸವ ಬಳಗ, ಬೆಳಗಾವಿ,  ಚನ್ನಬಸಪ್ಪ ಬಾಗೇವಾಡಿ ದಂಪತಿಗಳು, ನ್ಯಾಯವಾದಿಗಳು ಹಾಗೂ ಬಸವ ಅಭಿಮಾನಿ ಬಳಗದ ಅಧ್ಯಕ್ಷರು, ಬೆಳಗಾವಿ, ಜಯವೀರ ಎ..ಕೆ., ವಚನ ಸಾಹಿತ್ಯ ಪ್ರಚಾರಕರು, ರಾಯಬಾಗ, ಈರಣ್ಣ ಹುಲ್ಲೂರ, ಬಸವ ಧರ್ಮ ಪ್ರಚಾರಕರು, ಯರಗಟ್ಟಿ, ಶಿವಾನಂದ ಮುಧೋಳ, ಯುವ ರೈತ ಹೋರಾಟಗಾರರು, ಮೂಡಲಗಿ, ಮಹಾಂತೇಶ ಕಳ್ಳಿ,
ಸಾರಿಗೆ ಇಲಾಖೆ, ಸವದತ್ತಿ, ಕಲ್ಯಾಣಮ್ಮ ಹರಳಯ್ಯ ಆದರ್ಶ ದಂಪತಿಗಳು, ಬಸಪ್ಪ ರಾಮತಿ ದಂಪತಿಗಳು
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿರುವ ಕಲ್ಯಾಣಮ್ಮನವರ
ಗದ್ದುಗೆಯ ಪೂಜಾರಿಗಳು, ಚನ್ನಬಸಪ್ಪ ಬಾಗೇವಾಡಿ ದಂಪತಿಗಳು, ನ್ಯಾಯವಾದಿಗಳು ಹಾಗೂ ಬಸವ ಅಭಿಮಾನಿ ಬಳಗದ ಅಧ್ಯಕ್ಷರು, ಬೆಳಗಾವಿ, ಜ್ಯೋತಿರಾಮ ಜನವಾಡೆ ದಂಪತಿಗಳು, ಶಿಕ್ಷಣ ಇಲಾಖೆ, ಚಿಕ್ಕೋಡಿ.

Related Articles

Back to top button