Latest
ಮಹದಾಯಿ ಯೋಜನೆ ಜಾರಿಗೆ ಸರಕಾರಕ್ಕೆ ರೈತರೇ ಹಣ ಕೊಡಲಿದ್ದಾರೆ!

ಪ್ರಗತಿವಾಹಿನಿ ಸುದ್ದಿ, ಖಾನಾಪುರ
ರೈತಸೇನಾ ಕರ್ನಾಟಕದ ನೇತೃತ್ವದಲ್ಲಿ ಇಂದು ಕಳಸಾ ಮತ್ತು ಹಳತಾರ ಆಣೆಕಟ್ಟು ನಿರ್ಮಿಸುವ ಸಲುವಾಗಿ ಉಡಿ ತುಂಬುವ ಕಾರ್ಯಕ್ರಮ ಮತ್ತು ರೈತರಿಂದ ಗುದ್ದಲಿ ಪೂಜೆ ಕಾರ್ಯಕ್ರಮ ಕಣಕುಂಬಿಯ ಹತ್ತಿರ ನೆರವೇರಿತು.
ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಈ ಯೋಜನೆಯ ಜಾರಿಗಾಗಿ ರೈತರೇ ಹಣ ಸಂಗ್ರಹಿಸಿ ಕೊಡುವುದು ಹಾಗೂ ಬರಲಿರುವ ದಿನಗಳಲ್ಲಿ ಇನ್ನೂ ವಿಭಿನ್ನ ರೀತಿಯ ಹೋರಾಟ ಮಾಡುವ ನಿರ್ಣಯ ಕೈಗೊಳ್ಳಲಾಯಿತು.




