Latest
’ಸೈದ್ಧಾಂತಿಕ ಅನುಸಂಧಾನ’ ಕಾರ್ಯಾಗಾರ ನಾಳೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಬಂಡಾಯ ಸಾಹಿತ್ಯ ಸಂಘಟನೆಯ ವತಿಯಿಂದ ನಗರದ ಇನಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಸಭಾಂಗಣದಲ್ಲಿ ಮಾ.9 ರಂದು ಬೆಳಗ್ಗೆ 10.15 ಕ್ಕೆ ’ಸೈದ್ಧಾಂತಿಕ ಅನುಸಂಧಾನ’ ಕಾರ್ಯಾಗಾರ ಆಯೋಜಿಸಲಾಗಿದೆ. ಮರಾಠಿ ಸಾಹಿತಿ ಶರಣಕುಮಾರ ಲಿಂಬಾಳೆ ಉದ್ಘಾಟಿಸಲಿದ್ದು, ಸಾಹಿತಿ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಾಗಾರದಲ್ಲಿ ಸೈದ್ಧಾಂತಿಕ ವಾದಗಳ ಕುರಿತು ಆರು ವಿವಿಧ ಗೋಷ್ಠಿಗಳು ನಡೆಯಲಿವೆ.




