Latest

ಹುತಾತ್ಮ ಯೋಧನ ಮನೆಗೆ ದಿನೇಶ್ ಗುಂಡೂರಾವ್ ಭೇಟಿ; 10 ಲಕ್ಷ ರೂ. ಚೆಕ್ ಹಸ್ತಾಂತರ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
 ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಮದ್ದೂರಿನ ಗುಡಿಗೆರೆಯ ವೀರಯೋಧ ದಿವಂಗತ ಹೆಚ್.  ಗುರು ಅವರ    ಮನೆಗೆ ಭೇಟಿ ನೀಡಿ, ಕೆಪಿಸಿಸಿ ವತಿಯಿಂದ 5 ಲಕ್ಷ ರೂಪಾಯಿ ಚೆಕ್ ನ್ನು  ವೀರಯೋಧ  ಗುರು ತಂದೆಗೆ ಹಾಗೂ ಡಿಸಿಸಿ ಬ್ಯಾಂಕ್ ವತಿಯಿಂದ 5 ಲಕ್ಷ ರೂಪಾಯಿ ಚೆಕ್ ನ್ನು ವೀರ ಯೋಧ ಗುರು ಅವರ ಪತ್ನಿಗೆ  ನೀಡಿದರು.
ಈ ಸಂದರ್ಭದಲ್ಲಿ  ಎಐಸಿಸಿ ಕಾರ್ಯದರ್ಶಿ  ಪಿ.ಸಿ. ವಿಷ್ಣುನಾಧನ್, ಮಾಜಿ ಸಚಿವ ಚೆಲುವರಾಯ ಸ್ವಾಮಿ, ಎಂ.ಎಸ್ ಆತ್ಮಾನಂದ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ ಗಂಗಾಧರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸತ್ಯನ್ ಪುತ್ತೂರ್  ಅವರು ಉಪಸ್ಥಿತರಿದ್ದರು.

Related Articles

Back to top button