Kannada NewsKarnataka NewsNational

*ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ದಾಳಿ: ಅಧಿಕಾರಿಗಳಿಗೆ ಶಾಕ್*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ 11 ಕಡೆಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ  ಬೆಳ್ಳಂಬೆಳಗ್ಗೆ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. 

ಬೆಂಗಳೂರು ಆರ್ ಟಿ ಓ ವ್ಯವಸ್ಥಾಪಕ ನಿರ್ದೇಶಕ ಕುಮಾರಸ್ವಾಮಿ, ಮಂಡ್ಯ ನಗರಪಾಲಿಕೆ ಚೀಫ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಸ್ವಾಮಿ, ಬೀದರ್ ನ ಇಂಜಿನಿಯರ್ ಪ್ರೇಮ್ ಸಿಂಗ್, ಕೃಷ್ಣ ಮೇಲ್ದಂಡೆ ಯೋಜನೆಯ ಇಂಜಿನಿಯರ್, ಮೈಸೂರು ರೆವೆನ್ಯೂ ಇನ್ಸೆಕ್ಟರ್ ರಾಮಸ್ವಾಮಿ, ಹೂಟಗಳ್ಳಿ ನಗರ ಪಾಲಿಕೆಯ ಇನ್ಸೆಕ್ಟ‌ರ್ ಸೇರಿದಂತೆ ಹಲವು ಅಧಿಕಾರಿಗಳ ಆಸ್ತಿ ಮೇಲೆ ನಿಗಾ ಇಟ್ಟಿರುವ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿ ತಲಾಷ್ ಮಾಡುತ್ತಿದ್ದಾರೆ.

Home add -Advt

ಶಿವಮೊಗ್ಗದ ಸಿಮ್ಸ್ ಮೆಡಿಕಲ್ ಕಾಲೇಜಿನ ಎಫ್ ಡಿ ಎ ಲಕ್ಷ್ಮೀಪತಿ ಸಿಎನ್, ದಾವಣಗೆರೆ ಎಪಿಎಂಸಿ ನಿರ್ದೇಶಕ ಪ್ರಭು ಜೆ, ಮೈಸೂರಿನ ಸಹಾಯಕ ಇಂಜಿನಿಯರ್ ಗಿರೀಶ್ ಡಿಎಂ ಸೇರಿದಂತೆ 11 ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಅಕ್ರಮ ಹಣ ಸಂಪಾದನೆ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

Related Articles

Back to top button