Latest

ಭೀಕರ ಬಸ್ ಅಪಘಾತ;14 ಜನರ ದುರ್ಮರಣ

ಪ್ರಗತಿವಾಹಿನಿಸುದ್ದಿ; ಭೋಪಾಲ್: ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 14 ಜನರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ರೇವಾ ಬಳಿ ಸಂಭವಿಸಿದೆ.

ಹೈದರಾಬಾದ್ ನಿಂದ ಗೋರಖ್ ಪುರ್ ಗೆ ತೆರಳುತ್ತಿದ್ದ ಬಸ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದೆ. 14 ಜನರು ಸ್ಥಳದಲ್ಲೇ ಮೃತಪಟ್ತಿದ್ದಾರೆ. 40 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಹಗಿ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದಿಂದ ಬಸ್ ಜಖಂಗೊಂಡಿದ್ದು, ಬಸ್ ನೊಳಗೆ ಹಲವು ಪ್ರಯಾಣಿಕರು ಸಿಲುಕಿಕೊಂಡಿದ್ದರು. ಬಸ್ ನಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಹೊರತೆಗೆಯಲಾಗಿದೆ.

ಮುಂದುವರೆದ ವರುಣಾರ್ಭಟ; ಅಲರ್ಟ್ ಘೋಷಣೆ

Home add -Advt

https://pragati.taskdun.com/latest/karnatakaheavy-rain2-days/

Related Articles

Back to top button