Kannada NewsKarnataka NewsLatest

ಹುಕ್ಕೇರಿ ಮಠದಲ್ಲಿ ಬಹುಸಮುದಾಯಗಳ ಶ್ರೀಗಳ ಸಮಾಗಮ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದ ಶ್ರೀ ಗುರುಶಾಂತೇಶ್ವರ ಸಂಸ್ಥಾನದ ಹುಕ್ಕೇರಿ ಶಾಖೆ ಬಹು ಸಮುದಾಯಗಳ ಶ್ರೀಗಳ ಸಮಾಗಮದ ಅಪರೂಪದ ಸಂದರ್ಭಕ್ಕೆ ಸಾಕ್ಷಿಯಾಯಿತು.

ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ, ಗಾಣಿಗೇರ ಪೀಠದ ವಿಜಯಪುರ ವನಶ್ರೀ ಮಠದ ಬಸವಕುಮಾರ ಸ್ವಾಮೀಜಿ, ಚಿತ್ರದುರ್ಗದ ಮೇದಾರಕೇತೇಶ್ವರ ಮಹಾಮಠ ಇಮ್ಮಡಿ ಬಸವಮೇದಾರ ಕೇತೇಶ್ವರ ಸ್ವಾಮೀಜಿ, ಅಥಣಿ ಗಚ್ಚಿನ ಮಠದ ಶ್ರೀ ಶಿವಬಸವ ಸ್ವಾಮೀಜಿ, ಗಾವಂದೂರ ಮೋಕ್ಷಪತಿ ಸ್ವಾಮೀಜಿ, ಶ್ರೀ ಮಲಗಾನ ಹಿರೇಮಠ ಜಡೇಶಾಂತಲಿಂಗಾಚಾರ್ಯ ಸ್ವಾಮೀಜಿ, ದಾವಣಗೆರೆಯ ಶ್ರೀ ಬಸವಚೇತನ ಸ್ವಾಮೀಜಿ, ತೆಲಸಂಗ ಹಿರೇಮಠ ಶ್ರೀ ವಿಶ್ವೇಶ್ವರ ದೇವರು ಬೆಳಗಾವಿ ಹುಕ್ಕೇರಿ ಹಿರೇಮಠಕ್ಕೆ ಏಕಕಾಲದಲ್ಲಿ ಭೇಟಿ ನೀಡಿದರು.

ಎಲ್ಲ ಶ್ರೀಗಳಿಗೆ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಮಾತನಾಡಿ, “ಚಂದ್ರಶೇಖರ ಶಿವಾಚಾರ್ಯರು ಎಲ್ಲರೊಂದಿಗೆ ಬೆರೆತು ಕೆಲಸ ಮಾಡುವ ಅಪರೂಪದ ಸ್ವಾಮೀಜಿ. ಇಂದು ನಾವೆಲ್ಲರೂ ಶ್ರೀಮಠಕ್ಕೆ ಬಂದು ಸಂತಸಪಟ್ಟಿದ್ದೇವೆ,” ಎಂದರು.

ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮೀಜಿ ಮಾತನಾಡಿ, “ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಜಗದ್ಗುರು, ಪಂಚಪೀಠಾಧೀಶರು, ವೀರಕ್ತಮಠಾಧೀಶರು, ಅದ್ವೈತ ಪರಂಪರೆಯ ಸ್ವಾಮೀಜಿ ಹಾಗೂ ಎಲ್ಲ ಸ್ವಾಮೀಜಿಯವರೊಂದಿಗೆ ಅವಿನಾಭಾವ ಸಂಬಂಧ ಇಟ್ಟುಕೊಂಡಿದ್ದಾರೆ ಎಂದರು.

ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, “ಎಲ್ಲ ಸ್ವಾಮೀಜಿಗಳು ದೇಶದ ಅಮೂಲ್ಯ ಆಸ್ತಿ. ಭಾರತ ಇಂದು ಜಗದ್ಗುರು ಸ್ಥಾನದಲ್ಲಿದ್ದರೆ ಅದು ಈ ದೇಶದ ಸಾಧು ಸಂತರ ತ್ಯಾಗದಿಂದ ಎಂಬುದನ್ನು ಮರೆಯಕೂಡದು. ಕಾವಿ ಎಂಬುದು ತ್ಯಾಗದ ಸಂಕೇತ. ಎಲ್ಲ ಪರಮಪೂಜ್ಯರು ಬಂದು ಮಠದ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿ  ಸಂತಸ ಪಟ್ಟಿದ್ದು ಅಭಿಮಾನದ ಸಂಗತಿ,” ಎಂದರು.

*ಡಿ.ಕೆ.ಶಿವಕುಮಾರ್ ಗೆ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ*

https://pragati.taskdun.com/narishakti-tableaurepublic-daycm-basavaraj-bommaid-k-shivakumar/

*ಪ್ರಧಾನಿ ಮೋದಿಯನ್ನು ಬೈದರೆ ಆಕಾಶಕ್ಕೆ ಉಗುಳಿದಂತೆ; ಸಿದ್ದರಾಮಯ್ಯ ಟೀಕೆಗಳನ್ನು ನಾನು ಸ್ವಾಗತಿಸುತ್ತೇನೆ; ಟಾಂಗ್ ನೀಡಿದ ಸಿಎಂ ಬೊಮ್ಮಾಯಿ*

https://pragati.taskdun.com/cm-basavaraj-bommaireactionsiddaramaiahstatment-2/

ಸಿಎಂ ಈ ಎರಡು ಪ್ರಶ್ನೆಗಳಿಗೆ ಉತ್ತರಿಸುವರೇ?

https://pragati.taskdun.com/will-the-cm-answer-these-two-questions/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button