LatestUncategorized

*ರೋಹಿಣಿ ಸಿಂಧೂರಿ-ಶಾಸಕ ಸಾ.ರಾ.ಮಹೇಶ್ ನಡುವೆ ಸಂಧಾನ?*

ಪ್ರಗತಿವಾಹಿನಿ ಸುದ್ದಿ; ಮೈಸೂರು: ರಾಜ್ಯಾದ್ಯಂತ ಭಾರಿ ಸುದ್ದಿಯಾಗಿದ್ದ ಐಎ ಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಕೆ.ಆರ್.ನಗರ ಜೆಡಿಎಸ್ ಶಾಸಕ ಸಾ.ರಾ ಮಹೇಶ್ ಜಟಾಪಟಿ ಕೊನೆಗೂ ಸಂಧಾನದ ಹಂತಕ್ಕೆ ಬಂದು ನಿಂತಂತಿದೆ. ಪರಸ್ಪರ ಆರೋಪ- ಪ್ರತ್ಯಾರೋಪಗಳನ್ನು ಮಾಡಿಕೊಂಡು ದೂರು ದಾಖಲಿಸಿಕೊಂಡಿದ್ದವರು ಇದೀಗ ಸಂಧಾನಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಬದಲ್ಲಿ ಸಾ.ರಾಮಹೇಶ್ ವಿರುದ್ಧ ಭೂ ಕಬಳಿಕೆ ಸೇರಿದಂತೆ ಹಲವು ಆರೋಪಗಳನ್ನು ಮಾಡಿದ್ದರು. ಇದರ ಬೆನ್ನಲ್ಲೇ ಸಾ.ರಾ ಮಹೇಶ್, ರೋಹಿಣಿ ಸಿಂದೂರಿ ವಿರುದ್ಧ ಅಕ್ರಮ ಆಸ್ತಿಗಳಿಕೆ, ಬ್ಯಾಗ್ ಹರಗಣ ಸೇರಿದಂತೆ 6 ದೂರು ನೀಡಿದ್ದರು. ವಿಧಾನಸಭೆಯಲ್ಲಿಯೂ ವಿಷಯ ಪ್ರಸ್ತಾಪಿಸಿದ್ದ ಸಾ.ರಾ.ಮಹೇಶ್, ಅಧಿಕಾರಿಗೆ ಆಶ್ರಯ ಇದೆ, ಶಾಸಕನಾಗಿ ನನಗೆ ಆಶ್ರಯ ಇಲ್ಲ, ವೀಕ್ ಮೈಂಡೆಡ್ ಆಗಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು. ಶಾಸಕನಾಗಿ ನನ್ನನ್ನು ನಾನು ರಕ್ಷಣೆ ಮಾಡಿಕೊಳ್ಳಲಾಗುತ್ತಿಲ್ಲ, ಎಂದು ರೋಹಿಣಿ ಸಿಂಧೂರಿ ವಿರುದ್ಧ ತನಿಖೆ ನಡೆಸುವಂತೆ ಒತ್ತಾಯಿಸಿದ್ದರು.

Related Articles

ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ರೋಹಿಣಿ ಸಿಂಧೂರಿ ಶಾಸಕ ಸಾ.ರಾ,ಮಹೇಶ್ ಜೊತೆ ಸಂಧಾನ ಮಾಡಿಕೊಳ್ಳಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಮಾತುಕತೆ ನಡೆದಿದೆ ಎನ್ನಲಾಗಿದೆ. ಹಿರಿಯ ಐಎ ಎಸ್ ಅಧಿಕಾರಿ ಮಣಿವಣ್ಣನ್ ಮಧ್ಯಸ್ಥಿಕೆಯಲ್ಲಿ ಸಂಧಾನ ಮಾತುಕತೆ ನಡೆದಿದೆ. ಶಾಸಕ ಸಾ.ರಾ.ಮಹೇಶ್, ಅಧಿಕಾರಿ ಮಣಿವಣ್ಣನ್, ರೋಹಿಣಿ ಸಿಂಧೂರಿ ಚರ್ಚೆ ನಡೆಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಂಧಾನ ಮಾತುಕತೆಗೆ ಪುಷ್ಠಿ ನೀಡುವಂತಿದೆ.

*ಮಂತ್ರಿ ಮಾಲ್ ಗೆ ಬಿಗ್ ಶಾಕ್; BBMP ಅಧಿಕಾರಿಗಳಿಂದ ದಿಢೀರ್ ದಾಳಿ*

https://pragati.taskdun.com/bbmp-officersraidmantri-mall/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button