Kannada NewsKarnataka NewsLatest

ವಿಶ್ವಗುರುವಾಗುವುದಕ್ಕೆ ಪೂರಕ ಬಜೆಟ್ -ಡಾ.ಕೋರೆ

ಪ್ರಗತಿವಾಹಿನಿ ಸುದ್ದಿ, ನವದೆಹಲಿ: 

ಭಾರತ ವಿಶ್ವಗುರುವಾಗುವುದಕ್ಕೆ ಪೂರಕವಾದ ಬಜೆಟ್ ನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ ಎಂದು ರಾಜ್ಯಸಭೆ ಸದಸ್ಯ ಡಾ.ಪ್ರಭಾಕರ ಕೋರೆ ಶ್ಲಾಘಿಸಿದ್ದಾರೆ.

ಶಿಕ್ಷಣ ಸೇರಿದಂತೆ ಎಲ್ಲ ರಂಗಗಳಲ್ಲಿ ಭಾರತ ಮುಂಚೂಣಿಗೆ ಬರಬೇಕೆಂದು ನರೇಂದ್ರ ಮೋದಿ ಕಳೆದ 5 ವರ್ಷದಿಂದ ದೂರದೃಷ್ಟಿಯ ಕಾರ್ಯಕ್ರಮ ಹಾಕಿಕೊಳ್ಳುತ್ತ ಬಂದಿದ್ದಾರೆ. ಅದಕ್ಕೆ ಪೂರಕವಾಗಿ ಇಂದು ಮಂಡಿಸಿದ ಬಜೆಟ್ ಇದೆ. ಮುಂದಿನ 5 ವರ್ಷದಲ್ಲಿ ರಾಷ್ಟ್ರ ಮುನ್ನಡೆಯುವ ದಿಕ್ಕನ್ನು ಈ ಬಜೆಟ್ ತೋರಿಸಿದೆ. ದೇಶದ ಸಮಗ್ರ ಮತ್ತು ಪರಿಪೂರ್ಣ ಅಭಿವೃದ್ಧಿಗೆ ಇದು ದಾರಿ ಮಾಡಿಕೊಡಲಿದೆ ಎಂದು ಅವರು ಹೇಳಿದ್ದಾರೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button