Latest

ಮುಂಬೈ ಹೊಟೆಲ್ ವಿರುದ್ಧ ಕಾನೂನು ಕ್ರಮ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: 

ಹೊಟೆಲ್ ರೂಂ ಬುಕ್ ಮಾಡಿ ಹೋಗಿದ್ದರೂ ನನಗೆ ಒಳಗೆ ಪ್ರವೇಶ ಮಾಡಲು ಅವಕಾಶ ಕೊಡದೆ, ಸ್ವಲ್ಪ ಹೊತ್ತಿನ ನಂತರ ರೂಂ ಕ್ಯಾನ್ಸಲ್ ಮಾಡಿರುವ ಹೊಟೆಲ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ನಿರ್ಧರಿಸಿರುವುದಾಗಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ಶಾಸಕರೊಂದಿಗೆ ಮಾತನಾಡುವುದಿರಲಿ, ನನಗೆ ಸ್ನಾನವನ್ನೂ ಮಾಡಲು ಅವಕಾಶ ಕೊಟ್ಟಿಲ್ಲ. ಮೊದಲೇ ಬುಕ್ ಮಾಡಿ ಹೋದರೂ ಈ ರೀತಿ ಮಾಡಲು ಅವಕಾಶವಿಲ್ಲ. ಈ ಬಗ್ಗೆ ಈಗಾಗಲೆ ಕಾನೂನು ತಜ್ಞರ ಬಳಿ ಮಾತನಾಡಿದ್ದೇನೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ –

ಡಿ.ಕೆ.ಶಿವಕುಮಾರ್ ವಶಕ್ಕೆ ಪಡೆದ ಮುಂಬೈ ಪೊಲೀಸರು

ಮುಂಬೈ ಹೊಟೆಲ್ ತಲುಪಿದ ಡಿಕೆಶಿ: ಪೊಲೀಸರ ತಡೆ

ಮುಂಬೈ ವಿಮಾನ ಹತ್ತಿದ ಡಿ.ಕೆ.ಶಿವಕುಮಾರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button