Kannada NewsKarnataka NewsLatest
ಈ ಮಂತ್ರಿ ಇಲ್ಲೇನು ಮಾಡುತ್ತಿದ್ದಾರೆ ನೋಡಿ…

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ರಾಜ್ಯ ರಾಜಕಾರಣ ಕಳೆದ 8 ದಿನದಿಂದ ಯಾವ ರೀತಿಯಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ.
ಎಲ್ಲ ಪಕ್ಷಗಳ ಶಾಸಕರು ರೆಸಾರ್ಟ್, ಹೊಟೆಲ್ ಸೇರಿಕೊಂಡಿದ್ದಾರೆ.
ಅದರೆ ಇಲ್ಲೊಬ್ಬರು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ನಿರಾಳರಾಗಿದ್ದಾರೆ.
ಹೀಗೆ ಜ್ವಾಲಿಯಾಗಿ ರಸ್ತೆ ಬದಿ ಇಡ್ಲಿ, ಸಾಂಬಾರ್ ಸವಿಯುತ್ತಿರುವವರು ರಾಜ್ಯ ಅರಣ್ಯ ಸಚಿವರೂ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸತೀಶ್ ಜಾರಕಿಹೊಳಿ.
ಇಂದು ಅಧಿವೇಶನ ಮುಗಿಸಿ ಬೆಳಗಾವಿಗೆ ಆಗಮಿಸಿದ ಸತೀಶ್, ಮಾರ್ಗಮಧ್ಯೆ ಕಾರು ನಿಲ್ಲಿಸಿ ರಸ್ತೆ ಬದಿ ಗೂಡಂಗಡಿ ಇಡ್ಲಿ, ಸಾಂಬಾರ್ ಸವಿದರು.
ಸತೀಶ್ ಮೊದಲಿನಿಂದಲೂ ಸರಳ ಜೀವನ ಅಳವಡಿಸಿಕೊಂಡವರು. ಹೀಗೆ ರಸ್ತೆ ಬದಿ ತಿನ್ನುವುದು ಹೊಸದಲ್ಲದಿದ್ದರೂ ಈಗಿನ ರಾಜಕೀಯ ಸಂದರ್ಭದಲ್ಲಿ ವಿಶೇಷವೆನಿಸುತ್ತದೆ.




