Kannada NewsKarnataka NewsLatest

*ಸರಣಿ ಅಪಘಾತ; ಅಂಗಡಿಯೊಳಗೆ ನುಗ್ಗಿದ ಬೊಲೆರೊ ವಾಹನ*

ಪ್ರಗತಿವಾಹಿನಿ ಸುದ್ದಿ; ಶಿರಸಿ: ಬಸ್, ಬೋಲರ್ ಹಾಗೂ ಓಮ್ಮಿ ನಡುವೆ ಸರಣಿ ಅಪಘಾತ ಸಂಭವಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲುಕಿನ ಬಿಸಲಕೊಪ್ಪದಲ್ಲಿ ನಡೆದಿದೆ.

ಮಳಗಿಯಿಂದ ಶಿರಸಿಗೆ ತೆರಳುತ್ತಿದ್ದ ಓಮಿನಿ-ಬೋಲೆರೋ ವಾಹನ ಹಾಗೂ ಶಿರಸಿಯಿಂದ ಹಾವೇರಿಗೆ ಚಲಿಸುತ್ತಿದ್ದ ಬಸ್ ಗಳ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಬೊಲೆರೊ ವಾಹನ ಅಂಗಡಿಯೊಳಗೆ ನುಗ್ಗಿದೆ. ಹಲವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ

ಗಾಯಾಳುಗಳನ್ನು ಬಿಸಲಕೊಪ್ಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಅಪಘಾತ ಸ್ಥಳಕ್ಕೆ ಶಿರಸಿ ಗ್ರಾಮಿಣ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button