Belagavi NewsBelgaum NewsKannada NewsKarnataka News

ಮಾಜಿ ಶಾಸಕ ಎಸ್. ಎಸ್. ಭೀಮಣ್ಣನವರ ನಿಧನ: ಡಾ.ಪ್ರಭಾಕರ ಕೋರೆ ಸಂತಾಪ


ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಚಿಕ್ಕೋಡಿಯ ಮಾಜಿ ಶಾಸಕರಾದ ಶ್ರೀಕಾಂತ ಎಸ್. ಭೀಮಣ್ಣನವರ ಅವರ ನಿಧನಕ್ಕೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಕಂಬನಿಯನ್ನು ಮಿಡಿದಿದ್ದಾರೆ.

೧೯೮೯ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಮೂಲಕ ಚಿಕ್ಕೋಡಿಯ ವಿಧಾನ ಸಭಾ ಮತಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಎಸ್.ಎಸ್.ಭೀಮಣ್ಣನವರ ಒಬ್ಬ ನಿಷ್ಠಾವಂತ ಹಾಗೂ ಸಜ್ಜನ ರಾಜಕಾರಣಿಯಾಗಿದ್ದರು. ತಮ್ಮ ಸರಳತೆ ಹಾಗೂ ಪ್ರಾಮಾಣಿಕ ಸೇವೆಯಿಂದ ಚಿಕ್ಕೋಡಿಭಾಗದ ಅಸಂಖ್ಯ ರೈತರ ಕಣ್ಮಣಿಯಾಗಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ಉತ್ತಮವಾದ ಕೆಲಸಕಾರ್ಯಗಳನ್ನು ನೆರವೇರಿಸಿದ್ದರು. ಇಂದು ಸಮಾಜವು ಒಬ್ಬ ನಿಷ್ಠಾವಂತ ಬದ್ಧತೆಯ ಜನಪ್ರತಿನಿಧಿಯನ್ನು ಕಳೆದುಕೊಂಡು ಬಡವಾಗಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಹಾಗೂ ಅವರ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕುಟುಂಬಕ್ಕೆ ಕರುಣಿಸಲೆಂದು ಡಾ.ಕೋರೆಯವರು ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದಾರೆ.

Home add -Advt

Related Articles

Back to top button