Belagavi NewsBelgaum NewsKannada NewsKarnataka NewsLatest

*ಪಂಡಿತ್ ಜವಾಹರ್ ಲಾಲ್ ನೆಹರು ರವರ 134 ನೇ ಜಯಂತಿ ಹಾಗೂ ಸಹಾಯಕ ಬರಹಗಾರರಿಗೆ ಸನ್ಮಾನ ಕಾರ್ಯಕ್ರಮ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸಮೃದ್ಧ ಅಂಗವಿಕಲರ ಸಂಸ್ಥೆ ಶಾಹುನಗರ ಬೆಳಗಾವಿಯಲ್ಲಿ ಪಂಡಿತ್ ಜವಾಹರ್ ಲಾಲ್ ನೆಹರು ರವರ 134 ನೇ ಜಯಂತಿ ಹಾಗೂ ಸಹಾಯಕ ಬರಹಗಾರರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.


ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಳಗಾವಿ ಉತ್ತರ ವಲಯದ ಶಾಸಕರು ಆಸಿಫ್ ಸೆಟ್, ಅತಿಥಿಗಳಾಗಿ ಜೈನ ಇಂಜಿನಿಯರಿಂಗ್ ಕಾಲೇಜ್ ಪ್ರಧ್ಯಾಪಕರು ವಿನಾಯಕ್, ಕಾರ್ಯಕ್ರಮದ ಗಣಾಧ್ಯಕ್ಷತೆಯನ್ನು ಉದ್ಯಮಗಾರರು ಹಾಗೂ ಸಮಾಜ ಸೇವಕರು ಪದ್ಮಪ್ರಸಾದ್ ಹುಲಿ ರವರು ವಹಿಸಿಕೊಂಡಿದ್ದರು.


ಹಾಗೂ ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶಿವನಗೌಡ ಪಾಟೀಲ್ ಕಾರ್ಯದರ್ಶಿಗಳಾದ ಪ್ರಶಾಂತ ಪೋತದಾರ ಸಂಸ್ಥೆಯ ಸದಸ್ಯರು ಹಾಗೂ ಸಹಾಯಕ ಬರಹಗಾರರು ಪಾಲ್ಗೊಂಡು ಯಶಸ್ವಿಗೊಳಿಸಿದರು.


ಸಂಸ್ಥೆಯ ಅಧ್ಯಕ್ಷರಾದ ಶಿವನಗೌಡ ಪಾಟೀಲ್ ರವರು ಸಂಸ್ಥೆ ಬೆಳೆದು ಬಂದ ದಾರಿ ಹಾಗೂ ಕಾರ್ಯವೈಕರಿಗಳ ಕುರಿತು ತಿಳಿಸಿದರು
ಮುಖ್ಯ ಅತಿಥಿಗಳಾದ ಬೆಳಗಾವಿ ಉತ್ತರ ವಲಯದ ಶಾಸಕರಾದ ಆಸಿಫ್ ಸೆಟ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಸ್ಥೆಯ ಕಾರ್ಯಗಳ ಕುರಿತು ಪ್ರಶಂಸಿಸಿ ಮುಂದಿನ ದಿನಗಳಲ್ಲಿ ಸರ್ಕಾರದಿಂದ ಸಂಸ್ಥೆಗೆ ಶಾಶ್ವತ ನೆಲೆಯನ್ನು ಒದಗಿಸುವುದರ ಕುರಿತು ಭರವಸೆ ನೀಡಿದರು.


ಅತಿಥಿಗಳಾದ ಜೈನ್ ಇಂಜಿನಿಯರಿಂಗ್ ಕಾಲೇಜ್ ಪ್ರಾಧ್ಯಾಪಕರಾದ್ ವಿನಾಯಕ್ ರವರು ಸಂಸ್ಥೆಯು ಅಂಗವಿಕಲರಿಗೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ನೆರವಾಗುತ್ತಿದ್ದು ವಿದ್ಯಾಭ್ಯಾಸ ಮಾಡುವವರಿಗೆ ಹಾಗೂ ಬರಹಗಾರರಿಗೆ ಪ್ರೋತ್ಸಾಹಿಸುವುದು ಕಂಡು ಹರ್ಷ ವ್ಯಕ್ತಪಡಿಸಿದರು
ಕಾರ್ಯಕ್ರಮದ ಗಣಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಸಮಾಜ ಸೇವಕರು ಪದ್ಮಪ್ರಸಾದ್ ಹುಲಿ ರವರು ಸಂಸ್ಥೆಯು ಸಾಮಾಜಿಕವಾಗಿ ಉನ್ನತ ಸ್ಥಾನಕ್ಕೆ ಬೆಳೆಯಲೆಂದು ಹಾರೈಸಿ ನಾವೆಲ್ಲರೂ ಸಂಸ್ಥೆಗೆ ಸದಾಕಾಲ ಬೆನ್ನೆಲುವಾಗಿರುತ್ತೇವೆ ಎಂದು ತಿಳಿಸಿದರು. ಕಾರ್ಯಕ್ರಮವನ್ನು ವನಿತಾ ತಿಪ್ಪಾಯಿ ರವರು ನಿರೂಪಿಸಿದರು

ಕಾರ್ಯದರ್ಶಿಗಳಾದ ಪ್ರಶಾಂತ್ ಪೋತದಾರರವರು ಸ್ವಾಗತಿಸಿದರು. ಸಂಸ್ಥೆಯ ಸದಸ್ಯರಾದ ಕಿರಣ್ ಮೋರೆಪಂತರವರು ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button