Belagavi NewsBelgaum NewsElection NewsKannada NewsKarnataka NewsPolitics

*ಜೈನಾಪುರ ಗ್ರಾಮದ 50 ಕ್ಕೂ ಕಾರ್ಯಕರ್ತರು ಬಿಜೆಪಿ ಸೇರ್ಪಡೆ* *ಸ್ವಾಗತಿಸಿದ ಶಶಿಕಲಾ ಜೊಲ್ಲೆ*

*ನೂತನ ಕಾರ್ಯಕರ್ತರ ಆಗಮನದಿಂದ ಬಿಜೆಪಿ ಪಕ್ಷಕ್ಕೆ  ಮತ್ತಷ್ಟು ಬಲ ಎಂದ ಮಾಜಿ ಸಚಿವೆ ಹಾಗೂ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ*

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ರಾಯಬಾಗ ಮತಕ್ಷೇತ್ರದ ನಾಗರಮುನ್ನೊಳಿ ಗ್ರಾಮದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಅಭಿವೃಧ್ದಿ ಕಾರ್ಯಗಳು ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ 8,810 ಕೋಟಿ ರೂ.ಗಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ನಾಗರಮುನ್ನೊಳಿ ಗ್ರಾಮದ 50ಕ್ಕೂ ಹೆಚ್ಚು ಅನ್ಯ ಪಕ್ಷಗಳ ಕಾರ್ಯಕರ್ತರು ಬಿಜೆಪಿ ಸೇರಿದರು.

ಸಿದ್ದಪ್ಪ ಚೌಗಲಾ, ಬಸವರಾಜ ಯಾದಗುಡೆ, ಲಕ್ಷ್ಮಣ ಬಂಬಲವಾಡೆ ಸತ್ಯಪ್ಪ ಜುಲಪೆ,  ಈರಪ್ಪ ಚೌಗಲಾ ಮತ್ತು ಜೈನಾಪುರ ಗ್ರಾಮದ ದುಂಡಪ್ಪ  ಘರಬುಡೆ, ಈರಗೌಡ ಟೊಪುಗೊಳ, ರಾಜು ಭಾಕರೇ ರಾಮಗೌಂಡ ಸುಳಕುಡೆ ಅಲಗೊಂಡ ಬ್ಯಾಳಿ ರಾಜು ಮಠದ ಅರ್ಜುನ ಕಮತೆ ಹಾಗೂ ಅವರ ತಂಡದ ಸದಸ್ಯರು ಒಟ್ಟು 50 ಕ್ಕೂ ಅಧಿಕ ಸದಸ್ಯರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಅವರನ್ನು ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಶಾಸಕರಾದ  ಶಶಿಕಲಾ ಜೊಲ್ಲೆ  ಆತ್ಮೀಯವಾಗಿ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಅರುಣ ಐಹೊಳೆ, ವಿಜಯ ಕೋಟಿವಾಳೆ ರಾಯಗೌಡ ಕೆಳಗಿನಮನಿ, ರವಿ ಹಿರೇಕುಡೇ ,ಅಣ್ಣಾಸಾಬ ಖೇಮಲಾಪುರೆ, ಪ್ರಥ್ವಿರಾಜ ಜಾಧವ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button