Belagavi NewsBelgaum NewsKannada NewsKarnataka News

ರಾಮತಿರ್ಥ ನಗರದಲ್ಲಿ ಜಗಜ್ಯೋತಿ ಬಸವಣ್ಣನವರ ಜಯಂತಿ‌ ಆಚರಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಗಜ್ಯೋತಿ ಬಸವಣ್ಣನವರ ಜಯಂತಿಯ ಪ್ರಯುಕ್ತ ವೃತ್ತಕ್ಕೆ “ಶ್ರೀ ಜಗಜ್ಯೋತಿ ಬಸವೇಶ್ವರ ವೃತ್ತ” ಎಂದು ನಾಮಕರಣ ಮಾಡಿ ಜಯಂತಿ ಆಚರಿಸಲಾಗಿದೆ. 

ಬೆಳಗಾವಿಯ ರಾಮತೀರ್ಥ ನಗರದ ಪ್ರಮುಖ ವೃತ್ತಕ್ಕೆ ಶ್ರೀ ಜಗಜ್ಯೋತಿ ಬಸವೇಶ್ವರ ವೃತ್ತ” ಎಂದು ನಾಮಕರಣ ಮಾಡಿ, ಫಲಕವನ್ನು ನೆಟ್ಟು ಅರ್ಥಪೂರ್ಣವಾಗಿ ಬಸವಣ್ಣನವರ ಜಯಂತಿಯನ್ನು ಆಚರಿಸಲಾಯಿತು.

ಮುಂದಿನ ದಿನಗಳಲ್ಲಿ ಈ ವೃತ್ತವನ್ನು ಮಾದರಿ ಸಾರ್ವಜನಿಕ ಆಕರ್ಷಣೆಯ ಕೇಂದ್ರವಾಗಿ ಮಾರ್ಪಡಿಸಿ ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನವರ ಕೀರ್ತಿಯನ್ನು ಸಾರುವ ಆಕರ್ಷಣೀಯ ಸ್ಥಳವಾಗುವಂತೆ ಪರಿವರ್ತಿಸಬೇಕೆಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಈ ವೇಳೆ ಮಹಾಂತೇಶ ವಕ್ಕುಂದ, ರಾಜುಗೌಡ ಪಾಟೀಲ, ವಿಜಯ ನಂದಿ, ನವೀನ ಹಿರೇಮಠ, ನಗರ ಸೇವಕ ಹನಮಂತ ಕೊಂಗಾಲಿ ಸೇರಿದಂತೆ ರಾಮತೀರ್ಥ ನಗರ ಹಾಗೂ ಆಟೋ ನಗರದ ಪ್ರಮುಖ ಹಿರಿಯರು, ಬಂಧುಗಳು, ಸಮಾಜ ಸೇವಕರು ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಜನ‌ ಇದ್ದರು.‌

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button