Belagavi NewsBelgaum News

*ವಿದ್ಯುತ್ ಕಂಬಕ್ಕೆ ಬೈಕ್‌ ಡಿಕ್ಕಿ: ಸವಾರ ಸಾವು*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ಹನುಮಾನ ನಗರದಲ್ಲಿ ಬೈಕ್ ಸವಾರ ನಿಯಂತ್ರಣ ಕಳೆದುಕೊಂಡು ವಿದ್ಯುತ್ ಕಂಬಕ್ಕೆ ಡಿಕ್ಕೆ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿರು ಘಟನೆ ನಡೆದಿದೆ. 

ಮಂಗಳವಾರ ಸಾಯಂಕಾಲ ಹನುಮಾನ ನಗರ ವೃತ್ತದ ಬಳಿ ಈ ಬೈಕ್ ಅಪಘಾತ ನಡೆದಿದೆ. ವೃತ್ತಿಯಿಂದ ಚಾಲಕನಾಗಿರುವ ಬೈಲಹೊಂಗಲ ತಾಲೂಕಿನ ಜಕನಾಯಕನ ಕೊಪ್ಪ ಗ್ರಾಮದ ಫಕೀರಪ್ಪ ಭೀಮಪ್ಪ ಚಚಡಿ (40) ಸ್ಥಳದಲ್ಲೇ ಮೃತಪಟ್ಟಿದ್ದಾನೆ. 

ಫಕೀರಪ್ಪ ಭೀಮಪ್ಪ ಚಚಡಿ ಅವರು, ಕೆಎ 24,ಎಚ್ಎನ್ 6068 ಸಂಖ್ಯೆಯ ಬೈಕ್ ಮೇಲೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ  ಪ್ರಾಥಮಿಕ ತನಿಖೆ ನಡೆಸಿದ್ದಾರೆ.‌ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button