Kannada NewsKarnataka News

ಮಾಜಿ ಶಾಸಕ ಮುತ್ತೆಣ್ಣವರ್ ಅವರಿಗೆ ಪುತ್ರ ವಿಯೋಗ

ಮಾಜಿ ಶಾಸಕ ಮುತ್ತೆಣ್ಣವರ್ ಅವರಿಗೆ ಪುತ್ರ ವಿಯೋಗ

ಪ್ರಗತಿವಾಹಿನಿ ಸುದ್ದಿ, ಗೋಕಾಕ  –ಮಾಜಿ ಶಾಸಕ ಎಂ.ಎಲ್.ಮುತ್ತೆಣ್ಣವರ್ ಅವರ ಪುತ್ರ ಸತ್ಯಾನಂದ ನಾಯಕ ಆಕಸ್ಮಿಕ ಘಟನೆಯೊಂದರಲ್ಲಿ ಸಾವಿಗೀಡಾಗಿದ್ದಾರೆ. ಅವರಿಗೆ 35 ವರ್ಷ ವಯಸ್ಸಾಗಿತ್ತು.

ದಾವಣಗೆರೆಯಲ್ಲಿ ಕೆನರಾ ಬ್ಯಾಂಕ್ ಮ್ಯಾನೇಜರ್ ಆಗಿ ಅವರು ಕಾರ್ಯನಿರ್ವಹಿಸುತ್ತಿದ್ದರು. ಮನೆಯ ಮಹಡಿಯ ನೀರಿನ ವಾಲ್ವ್ ಆನ್ ಮಾಡಲು ಹೋದಾಗ ಆಯತಪ್ಪಿ ಬಿದ್ದು ಅವರು ಮೃತರಾದರು.

ಅವರ ಅಂತ್ಯಕ್ರಿಯೆ ಭಾನುವಾರ ಬೆಳಗ್ಗೆ 9 ಗಂಟೆಗೆ ಸ್ವಗ್ರಾಮ ಗೋಕಾಕ ತಾಲೂಕಿನ ಈರನಟ್ಟಿಯಲ್ಲಿ ನಡೆಯಲಿದೆ.

ಮುತ್ತೆಣ್ಣವರ್ ಗೋಕಾಕ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಕೆಲಸ ಮಾಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button