Kannada NewsKarnataka NewsPolitics

*ಕನ್ನಡ ಪರ ಸಂಘಟನೆಗಳಿಗೆ ವಾರ್ನಿಂಗ್ ಕೊಟ್ಟ ಡಿಸಿಎಂ ಡಿಕೆಶಿ*

ಪ್ರಗತಿವಾಹಿನಿ ಸುದ್ದಿ: ಯಾವುದೇ ಕನ್ನಡ ಪರ ಸಂಘಟನೆಗಳು ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಈ ಬಗ್ಗೆ ತಾವು ವಾರ್ನಿಂಗ್ ನೀಡುತ್ತಿದ್ದು, ಒಂದು ವೇಳೆ ಆ ರೀತಿಯ ಚಟುವಟಿಕೆಗಳು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. 

ಶುಕ್ರವಾರ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ನ.1 ಕನ್ನಡ ರಾಜ್ಯೋತ್ಸವದ ದಿನ. ಇದು ಕನ್ನಡಿಗರೆಲ್ಲರಿಗೂ ಮಹತ್ವದ ದಿನ. ಬೆಂಗಳೂರು ಅಭಿವೃದ್ಧಿ ಸಚಿವನಾಗಿ ಹಾಗೂ ಕರ್ನಾಟಕ ಸರ್ಕಾರದ ಹಬ್ಬವಾಗಿ ಈ ದಿನವನ್ನು ಆಚರಿಸಲು ನಾನು ಸಂಭ್ರಮಿಸುತ್ತೇನೆ . ಯಾವುದೇ ಕಂಪನಿಗಳು, ಶಿಕ್ಷಣ ಸಂಸ್ಥೆಗಳು ಅಂದು ಕನ್ನಡ ಧ್ವಜವನ್ನು ಹಾರಿಸಬೇಕ ಎಂದು ಹೇಳಿದರು.

ಕನ್ನಡ ಭಾಷೆಗೆ ಪ್ರತಿಯೊಬ್ಬರೂ ಸಹ ಗೌರವ ನೀಡಲೇಬೇಕು ಎಂದು ನುಡಿದ ಡಿ.ಕೆ. ಶಿವಕುಮಾ‌ರ್, ಎಲ್ಲಾ ಕಂಪನಿಗಳು ಮತ್ತು ವಾಣಿಜ್ಯ ಸಂಸ್ಥೆಗಳು ಅಂದು ಕನ್ನಡದ ಧ್ವಜ ಹಾರಿಸುವುದು ಕಡ್ಡಾಯವಾಗಿದೆ ಎಂದು ಹೇಳಿದರು.

Home add -Advt

Related Articles

Back to top button