Kannada NewsKarnataka News

3 ಕುರಿಗಳನ್ನು ಬಲಿ ಪಡೆದ ಹುಲಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಖಾನಾಪುರ ತಾಲೂಕಿನ ನಂದಗಡ ಗ್ರಾಮದ ವಡೇಮಾಳ ಗುಡ್ಡದಲ್ಲಿ ಹುಲಿಯೊಂದು 3 ಕುರಿಗಳನ್ನು ತಿಂದು ಹಾಕಿದೆ.

ನಂದಗಡದ ದೇಮಣ್ಣ ಖನಗಾವಿ ಅವರ ಜಮೀನ ಸರ್ವೆ ನಂ.೨೨೩ ರಲ್ಲಿ ಮಂಗಳವಾರ ಮೂರು ಕುರಿಗಳನ್ನು ತಿಂದಿದ್ದು,  ಸಮೀಪದಲ್ಲಿದ್ದ ರೈತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಸ್ಥಳಕ್ಕೆ ಭೇಟಿ ನೀಡಿದ ಶಾಸಕಿ ಡಾ.ಅಂಜಲಿ ನಿಂಬಾಳಕರ ಅವರ ಕಾರ್ಯಕರ್ತರಾದ ಬಾಬು ಹತ್ತರವಾಡ, ಮಹಾಂತೇಶ ಕಲ್ಯಾಣಿ, ರುದ್ರಪ್ಪ ಪಾಟೀಲ ಅವರು  ರೈತನ ಆರೋಗ್ಯ ಮತ್ತು ಘಟನೆಯ ಕುರಿತು ವಿವರ ಪಡೆದಿದ್ದಾರೆ.  ಘಟನೆಯಿಂದಾಗಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button