Belagavi NewsBelgaum NewsKannada NewsKarnataka NewsNational
*ಈ ಸಲ ಪಕ್ಕಾ ಕಪ್ ನಮ್ದೆ: ವಿಷೇಶ ಪೂಜೆ ಸಲ್ಲಿಸಿದ ಕರವೇ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಐಪಿಎಲ್ ಫೈನಲ್ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ತಂಡಗಳ ನಡುವೆ ನಡೆಯಲಿದ್ದು, ಫೈನಲ್ ಪಂದ್ಯದಲ್ಲಿ ನಮ್ಮ ಹೆಮ್ಮೆಯ ಆರ್ ಸಿ ಬಿ ತಂಡ ಗೆದ್ದು ಬರಲಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಬಣದ ವಿಶೇಷ ಪೂಜೆ ಮಾಡಲಾಗಿದೆ.
ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಮಂಗಳವಾರ ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿರುವ ಗಣೇಶ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತ್ತು.
ಇದೆ ಸಂದರ್ಭದಲ್ಲಿ ವಿರಾಟ್ ಕೊಹ್ಲಿ, ಕನ್ನಡಿಗ ಮಯಾಂಕ್ ಅಗರವಾಲ್ ಸೇರಿ ತಂಡದ ಆಟಗಾರರ ಭಾವಚಿತ್ರ ಹಿಡಿದು ಪೂಜೆ ಸಲ್ಲಿಸಿ ಆರ್ ಸಿಬಿ ತಂಡಕ್ಕೆ ಜಯವಾಗಲೆಂದು ಘೋಷಣೆ ಹಾಕಿದರು.
ಈ ಸಲ ಕಪ್ ನಮ್ದೆ, ಗೆದ್ದು ಬಾ ಆರ್ಸಿಬಿ, ಗೆದ್ದು ಬಾ ಆರ್ಸಿಬಿ ಎಂದು ಘೋಷಣೆ ಹಾಕಿದ ಕರವೇ ಕಾರ್ಯಕರ್ತರು, ಶುಭಕೋರಿದರು.