Belagavi NewsBelgaum NewsFilm & EntertainmentKannada NewsKarnataka NewsLatestNational

*ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ: ಪದ್ಮಶ್ರೀ ನಾನಾ ಪಾಟೇಕರ್* *ಸೆಂಟ್ರಾ ಕೇರ್ ಆಸ್ಪತ್ರೆ ಉದ್ಘಾಟನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಾತಿ, ಧರ್ಮ, ಪಂಥ ಇವುಗಳನ್ನು ಮೀರಿ ಎತ್ತರದಲ್ಲಿ ಬೆಳೆದಿರುವ ಮಾನವೀಯ ಮೌಲ್ಯಗಳು ಇಂದಿನ ದಿನಗಳಲ್ಲಿ ಅತ್ಯಂತ ಪ್ರಸ್ತುತ. ಜನರು ಸಂಕುಚಿತ ಮನೋಭಾವನೆಯಿಂದ ಹೊರ ಬರಬೇಕು ಎಂದು ಖ್ಯಾತ ಚಲನಚಿತ್ರ ನಟ, ಪದ್ಮಶ್ರೀ ನಾನಾ ಪಾಟೇಕರ್ ಕರೆ ನೀಡಿದರು.

 ಅವರು ತಿಲಕವಾಡಿಯಲ್ಲಿ ಆರಂಭವಾಗಿರುವ ಸೆಂಟ್ರಾಕೇರ್ ಆಸ್ಪತ್ರೆ ಉದ್ಘಾಟನೆಯ ನಂತರ ಖಾನಾಪೂರ ರಸ್ತೆಯ ಶಗುನ್ ಗಾರ್ಡ್ನನಲ್ಲಿ ನಡೆದ ಸಮಾರಂಭದಲ್ಲಿ  ಮಾತನಾಡುತ್ತಾ, ಇಂದು  ಹಣದ  ಅಗತ್ಯತೆ ಎಲ್ಲರಿಗೂ ಇದೆ, ಆದರೆ ತಮಗೆ ಅಗತ್ಯವಿರುವಷ್ಟು ಹಣವನ್ನು  ಉಳಿಸಿಕೊಂಡು  ಉಳಿದ ಹಣವನ್ನು ಸಮಾಜ ಒಳಿತಿಗಾಗಿ ಮೀಸಲಿಡಿ ಎಂದು ಪಾಟೇಕರ್ ಕಿವಿ ಮಾತು ಹೇಳಿದರು.

ಪುಣೆಯ ಅಣ್ಣಾ ಭಿಡೆ, ಮಿಸಳವಾಲಾ ಅವರ ಉದಾಹರಣೆಯನ್ನು ಉಲ್ಲೇಖಿಸಿ , ಅವರು ಕೇವಲ ಮಿಸಳ್ ಮಾರಾಟಮಾಡದೇ,  ಪ್ರೀತಿ, ಸ್ನೇಹ, ಗೌರವದಿಂದ ಗ್ರಾಹಕರಿಗೆ ರುಚಿಯನ್ನು ಹಂಚುತ್ತಾರೆ   ಎಂದು ಹೇಳಿದರು .

 ಕೃಷಿಕ ಸಮುದಾಯದ ಸಂಕಷ್ಟವನ್ನೂ ಅವರು ಉಲ್ಲೇಖಿಸಿ,  ಅಕಾಲಿಕ  ಮಳೆ  ಅಥವಾ  ಬರದಿಂದ ಕೃಷಿಕ ಕೃಷಿಯಿಂದ ವಿಮುಖನಾಗುತ್ತಿದ್ದಾನೆ, ಸಾಲದ ಭಾದೆ ರೈತ ಸಮುದಾಯವನ್ನು ಕಂಗಾಲಾಗಿಸಿದೆ ಎಂದು ಖೇದ ಪಡಿಸಿದರು .  

Home add -Advt

ಇದಕ್ಕೆ ಪರಿಹಾರವಾಗಿ ಚಿಕ್ಕ ಹಿಡುವಳಿದಾರರು ಸಮೂಹ ಕೃಷಿಯತ್ತ ಮುಖ ಮಾಡಬೇಕಾದ ಅನಿವಾರ್ಯತೆ ಕುರಿತಪ, ಅವರ ಅನುಭವ ಮತ್ತು ನಿದರ್ಶನದ ಮೂಲಕ ತಿಳಿಹೇಳಿದರು.  

ವೃದ್ದಾವಸ್ಥೆಗೆ ತಲುಪುವುದು ಸಾಮಾನ್ಯ ಪ್ರಕ್ರಿಯೆಯಾದರೂ , ವಯಸ್ಸಾದವರು ಮುದುಡದೆ,  ಸದಾ ಚುರುಕುತನದಿಂದ  ಜೀವನ ನಡೆಸಬೇಕು  ಹೇಳಿದರು.  ಡಯಾಲಿಸಿಸ್ ಯಂತ್ರವು ರಕ್ತದಿಂದ ಅಶುದ್ಧಿಗಳನ್ನು ತೆಗೆದುಹಾಕುವಂತೆ , ಸಮಾಜವೂ ಶುದ್ಧವಾದ  ಚಿಂತನೆಗಳನ್ನು  ಅನುಸರಿಸಬೇಕು  ಎಂದು ಸಲಹೆ ನೀಡಿದರು.  ನಾಟಕ ಚಲನಚಿತ್ರಕ್ಕಿಂತ ಶಕ್ತಿಶಾಲಿಯಾಗಿದೆ, ಏಕೆಂದರೆ ಅದು ನೆರವಾಗಿ  ಜನರೊಂದಿಗೆ  ಸಂಪರ್ಕ  ಸಾಧಿಸುತ್ತದೆ ಎಂದು ಹೇಳಿದರು.  ಅಧಿಕಾರಿಗಳು ತಮ್ಮ ವೃತ್ತಿಯನ್ನು ಆರಾಧಿಸಿ , ಆನಂದಿಸಬೇಕು  ಮತ್ತು ಆರೋಗ್ಯ ಸೇವೆಗಳು ಎಲ್ಲ ಜನರಿಗೂ ತಲುಪಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.

 ಸಂಭಾಜಿ ಭಿಡೆ ಗುರುಜಿ ಅವರು ಮಾತನಾಡುತ್ತಾ   ಸೆಂಟ್ರಾಕೇರ್ ಆಸ್ಪತ್ರೆಯು  ರೋಗಿಗಳಿಗೆ ಉತ್ತಮ  ಆರೋಗ್ಯ  ಸೇವೆ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.  ಸೂರ್ಯನಮಸ್ಕಾರ’  ಆರೋಗ್ಯ ಕಾಯ್ದುಕೊಳ್ಳುವ ಏಕೈಕ ಉಪಕ್ರಮ. ಸೂರ್ಯನಮಸ್ಕಾರ ಎಲ್ಲರ ದಿನಚರಿಯ ಭಾಗವಾಗಲಿ ಎಂದು ಆಶಯ ವ್ಯಕ್ತಪಡಿಸಿದರು.  ಅವರು ಸೆಂಟ್ರಾಕೇರ್ ಆಸ್ಪತ್ರೆ ಅಂತರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ಶ್ಲಾಘಿಸಿದರು .

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ,  ಮಾತನಾಡುತ್ತಾ , ಸಾರ್ವಜನಿಕ ಜೀವನದಲ್ಲಿ ನಾವು ಸದಾ ಒತ್ತಡದಲ್ಲಿರುತೇವೆ , ಸಧಾ ಕಾರ್ಯಕ್ರಮ , ಕೆಲಸದಲ್ಲಿ  ನಿರತರಾಗಿರುತ್ತೇವೆ.  ನಾನಾ ಪಾಟೇಕರ್ ಅವರ ನಿಯಂತ್ರಣ’ ಎಂಬ ಪ್ರಸಿದ್ಧ ಡೈಲಾಗ್ ಅನ್ನು ಉಲ್ಲೇಖಿಸಿ , ತಮ್ಮ ಜೀವನದಲ್ಲಿಯೂ ಅದನ್ನ ಅಳವಡಿಸಿಕೊಳ್ಳಲು ಯತ್ನಿಸುತ್ತಿದ್ದೇನೆ ಎಂದು ಹೇಳಿದರು. 

ದಿನದಿಂದ ದಿನಕ್ಕೆ ಕಾಯಿಲೆಗಳು ಹೆಚ್ಚಾಗುವುದರಿಂದ ಹೊಸ ಆಸ್ಪತ್ರೆಗಳ ಆಗತ್ಯವಿದೆ ಎಂದು ಹೇಳಿದರು . ಡಾ . ನೀತಾ ದೇಶಪಾಂಡೆ ಅವರ   ಪ್ರಯತ್ನವನ್ನು ಅವರು ಅಭಿನಂದಿಸಿ , ಸೆಂಟ್ರಾಕರ್   ಆಸ್ಪತ್ರೆ ಕಟ್ಟಿ ಬೆಳಸುವ ಅವರ ಶೃಮವನ್ನು  ಶ್ಲಾಘಿಸಿದರು .  ಭಿಡೆ ಗುರುಜಿ ಮತ್ತು ನಾನಾ ಪಾಟೇಕರ್ ಅವರು ಸಮಾಜ ಸೇವೆಯಲ್ಲಿ  ಕೊಡುಗೆ ನೀಡುತ್ತಿರುವ ಅವರ ಕಾರ್ಯವನ್ನು ಕೊಂಡಾಡಿದರು . ಆಸ್ಪತ್ರೆಯು ರೋಗಿಗಳ ಭಾವನೆಗಳನ್ನು ಅರ್ಥಮಾಡಿಕೊಂಡು ಸೇವೆ ನೀಡಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಹಿಂದೆಲ್ಲ ವೈದ್ಯರ ಸಂಖ್ಯೆಯೂ ಕಡಿಮೆ ಇತ್ತು, ರೋಗಗಳ ಸಂಖ್ಯೆಯೂ ಕಡಿಮೆ ಇತ್ತು. ಆದರ ಇತ್ತೀಚಿನ ದಿನಗಳಲ್ಲಿ ವೈದ್ಯರ ಸಂಖ್ಯೆ ಹೆಚ್ಚುತ್ತಿದೆ, ಹಾಗೆಯೇ ರೋಗಗಳ ಸಂಖ್ಯೆಯೂ ಬೆಳೆಯುತ್ತಿದೆ. ಆಸ್ಪತ್ರೆಗೆ ಬಂದ ರೋಗಿ ಆದಷ್ಟು ಬೇಗ ಮನೆಗೆ ಮರಳಬೇಕೆಂದು ಬಯಸುತ್ತಾನೆ. ಜನರು ವೈದ್ಯರಲ್ಲಿ ದೇವರ ಸ್ವರೂಪ ಕಾಣುತ್ತಾರೆ ಎಂದರು.

ಬೆಳಗಾವಿಯ ಜನರಿಗೆ ಉತ್ತಮ ಸೇವೆ ಸಲ್ಲಿಸಬೇಕೆನ್ನುವ ಮಹದಾಸೆಯಿಂದ ಡಾ.ನೀತಾ ದೇಶಪಾಂಡೆ ಮತ್ತು ತಂಡದವರು ನೂತನ ಆಸ್ಪತ್ರೆ ಆರಂಭಿಸಿದ್ದಾರೆ. ಇದರಿಂದ ಅವರಿಗೂ, ಬೆಳಗಾವಿಯ ಜನರಿಗೂ ಒಳ್ಳೆಯದಾಗಲಿ. ರೋಗ ಬರುವುದನ್ನು ತಡೆಯುವುದಕ್ಕೇ ಮೊದಲ ಆದ್ಯತೆ ಎನ್ನುವ ಸೆಂಟ್ರಾಕೇರ್ ಆಸ್ಪತ್ರೆಯ ಧ್ಯೇಯ ಉತ್ತಮವಾಗಿದೆ. ಜನರು ಇದರ ಸದುಪಯೋಗಪಡಿಸಿಕೊಂಡು ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳಲಿ ಎಂದು ಸಚಿವರು ಹೇಳಿದರು. 

ನಾನಾ ಪಾಟೇಕರ್ ಮತ್ತು ಸಂಭಾಜಿ ಭಿಡೆ ಗುರೂಜಿ ನಿಸ್ವಾರ್ಥದಿಂದ ಸಮಾಜ ತಿದ್ದುವ ಕೆಲಸ ಮಾಡುತ್ತಿದ್ದಾರೆ. ಡಾ.ಪ್ರಭಾಕರ ಕೋರೆ ಬೆಳಗಾವಿಯ ಹೆಸರು ಜಾಗತಿಕ ನಕ್ಷೆಯಲ್ಲಿ ಮೂಡುವಂತೆ ಮಾಡಿದ್ದಾರೆ. ಅವರೆಲ್ಲ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಹೆಬ್ಬಾಳಕರ್ ಪ್ರಶಂಸಿಸಿದರು.

 ಕೆಎಲ್ ಇ ಸಂಸ್ಥೇಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ್ ಕೋರೆ , ಮಾತನಾಡುತ್ತಾ , ವೈದ್ಯರು ಬಡವರಿಗಾಗಿ ಸೇವೆ ನೀಡಬೇಕು ಎಂದು ಹೇಳಿದರು.  ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಳ್ಳುತ್ತಾ , ಹಿಂದಿನ ಕಾಲದಲ್ಲಿ  ಎಲ್ಲರೂ ಕೃಷ್ಣಾ  ನದಿಯ ನೀರು  ಕುಡಿಯುತ್ತಿದ್ದೆವು, ಆಗ ನೀರಿನ  ಮೂಲಕ ಹರಡುವ  ಕಾಯಿಲೆಗಳೇ ಇಲ್ಲ . ಆದರೆ ಇಂದಿನ ದಿನಗಳಲ್ಲಿ ಖನಿಜ ( ಮಿನರಲ್ ) ನೀರು ಕುಡಿದರೂ ಕಾಯಿಲೆಗಳು ಬರುತ್ತಿವೆ, ಏಕೆಂದರೆ ನಮ್ಮ ನೀರು , ವಾಯು ಮತ್ತು ಆಹಾರ ಎಲ್ಲವೂ ಮಾಲಿನ್ಯಗೊಂಡಿವೆ ಎಂದು ವಿಷಾದ  ವ್ಯಕ್ತಪಡಿಸಿದರು. ತ್ವರಿತವಾಗಿ ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದೆ,  ಕೃತಕ ಬುದ್ಧಿಮತ್ತೆ (AI) ಕುರಿತು ಅರಿವು ಹೊಂದಿರಬೇಕು ಎಂದರು .

ಇಂದು ಬೆಳಗಾವಿ ಅಂತಾರಾಷ್ಟ್ರೀಯ ಮಟ್ಟದ ಆರೋಗ್ಯ ಕೇಂದ್ರವಾಗಿ ಬೆಳೆದಿದೆ. ನಾವು ಸಾವಿರ ಬೆಡ್ ಆಸ್ಪತ್ರೆ ಕಟ್ಟುತ್ತೇವೆ ಎಂದಾಗ ಎಲ್ಲರೂ ವ್ಯಂಗ್ಯವಾಡಿದರು. ಬೆಳಗಾವಿಯಂತ ಸಣ್ಣ ಊರಿಗೆ ಸಾವಿರ ಬೆಡ್ ಏಕೆ ಎಂದು ಪ್ರಶ್ನಿಸಿದರು. ಆದರೆ ಇಂದು ಅದೂ ಕಡಿಮೆಯಾಗುತ್ತಿದೆ. ಬೆಳಗಾವಿಯಲ್ಲಿ ಆರೋಗ್ಯ ಸೇವೆ ಸಾಕಷ್ಟು ಸುಧಾರಿಸಿದೆ ಎಂದರು.

ಬೆಳಗಾವಿ ಉತ್ತರ ಭಾಗದ ಶಾಸಕ ರಾಜು ಸೇಠ್ , ತಮ್ಮ ಕುಟುಂಬದೊಂದಿಗಿನ ಮೂರು  ತಲೆಮಾರಿನ ದೇಶಪಾಂಡೆ  ಕುಟುಂಬದೊಂದಿಗೆ ಇರುವ ಸಂಬಂಧವನ್ನು ಸ್ಮರಿಸಿ, ಆಸ್ಪತ್ರೆ ವ್ಯವಸ್ಥಾಪಕರಿಗೆ ಹಾಗೂ ಸಿಬ್ಬಂದಿಗೆ ಶುಭ ಹಾರೈಸಿದರು . 

ಡಾ . ನೀತಾ ದೇಶಪಾಂಡೆ ಅವರು ಆಸ್ಪತ್ರೆಯ ಸಂಕ್ಷಿಪ್ತ ಪರಿಚಯ ನೀಡಿದರು. ಸೆಂಟ್ರಾಕೇರ್ ಆಸ್ಪತ್ರೆಯಲ್ಲಿ  ಹೆಚ್ಚಿನ  ಪ್ರಕರಣಗಳಲ್ಲಿ  ರೋಗಿಗಳು 2-3 ದಿನಗಳಲ್ಲಿ ಚೇತರಿಸಿಕೊಂಡು ಮನೆಗೆ ಮರಳುವಂತೆ ಪ್ರಯತ್ನಿಸಲಾಗುತ್ತದೆ ಎಂದರು. ತಮ್ಮ ವೈದ್ಯ ವೃತ್ತಿಜೀವನದಲ್ಲಿ  ಡಾ . ಪ್ರಭಾಕರ್ ಕೋರೆ ಅವರ ಮಾರ್ಗದರ್ಶನ ಮತ್ತು ಬೆಂಬಲಕ್ಕೆ  ಕೃತಜ್ಞತೆ ಸಲ್ಲಿಸಿದರು.

ಮೀರಜ್ ನ ಸೇವಾಸದನ್ ಆಸ್ಪತ್ರೆಯ ಡಾ . ಅಮೃತಾ ರಾಟೆ ಮಾತನಾಡಿದರು. ದೀಪಕ್ ಕರಂಜಿಕರ್ ಸ್ವಾಗತಿಸಿದರು. ರೋಹಿತ್ ದೇಶಪಾಂಡೆ ಧನ್ಯವಾದ ಅರ್ಪಿಸಿದರು.

Related Articles

Back to top button