Kannada NewsKarnataka NewsLatest

*ತಾಯಿ ಶೌಚಕ್ಕೆ ಹೋಗಿದ್ದಾಗ ಒಂದೂವರೆ ತಿಂಗಳ ಮಗುವನ್ನೇ ಕದ್ದೊಯ್ದ ಗ್ಯಾಂಗ್*

ಪ್ರಗತಿವಾಹಿನಿ ಸುದ್ದಿ: ತಾಯಿ ಶೌಚಾಲಯಕ್ಕೆ ಹೋಗಿದ್ದ ವೇಳೆ ಒಂದೂವರೆ ತಿಂಗಳ ಮಗುವನ್ನೇ ಗ್ಯಾಂಗ್ ವೊಂದು ಕದ್ದೊಯ್ದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಶ್ರೀದೇವಿ ಹಾಗೂ ರಮೇಶ್ ದಂಪತಿಯ ಒಂದುವರೆ ತಿಂಗಳ ಗಂಡು ಮಗುವನ್ನು ಗ್ಯಾಂಗ್ ಹೊತ್ತೊಯ್ದಿದೆ. ಶ್ರೀದೇವಿ ಮಗುವಿನೊಂದಿಗೆ ಆಸ್ಪತ್ರೆಗೆ ಬಂದಿದ್ದರು. ಚಿಕಿತ್ಸೆ ಬಳಿಕ ಮನೆಗೆ ವಾಪಾಸ್ ಆಗುತ್ತಿದ್ದಾಗ ಬಳ್ಳಾರಿ ಮಹಾನಗರ ಪಾಲಿಕೆ ಆವರಣದಲ್ಲಿ ಶೌಚಾಲಯಕ್ಕೆಂದು ಹೋಗಿದ್ದರು. ಈ ವೇಳೆ ಮಗುವನ್ನು ಹೊರಗಡೆ ಬಿಟ್ಟು ತಾಯಿ ಶೌಚಕ್ಕೆ ಹೋಗಿದ್ದಾಗ ಬುರ್ಖಾ ಧರಿಸಿದ್ದ ಮಹಿಳೆಯೊಬ್ಬಳು ಬಂದು ಮಗುವನ್ನು ಹೊತ್ತೊಯ್ದಿದ್ದಾಳೆ.

ಮಗುವನ್ನು ಕದ್ದೊಯ್ಯುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಗುವಿನ ತಂದೆ-ತಾಯಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಒಂದೇ ದಿನದಲ್ಲಿ ಮಗು ಕದ್ದ ಗ್ಯಾಂಗ್ ನ್ನು ಬಂಧಿಸಿದ್ದಾರೆ. ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಲಾಗಿದ್ದು, ಹಣದ ಆಸೆಗಾಗಿ ಮಗು ಕದ್ದು ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

Home add -Advt

Related Articles

Back to top button