Kannada NewsKarnataka NewsLatest

*ನಡುರಸ್ತೆಯಲ್ಲಿಯೇ ಯುವತಿಗೆ ಲೈಂಗಿಕ ಕಿರುಕುಳ: ಕಾಮುಕ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಅಪಘಾತವಾಗಿದ್ದ ಶ್ವಾನವನ್ನು ರಕ್ಷಿಸುತ್ತಿದ್ದ ಯುವತಿಗೆ ಕಾಮುಕನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಜಕ್ಕೂರು ಮುಖ್ಯರಸ್ತೆಯಲ್ಲಿ ಸೆ.೭ರಂದು ರಾತ್ರಿ ಶ್ವಾನಕ್ಕೆ ಅಪಘಾತವಾಗಿ ರಸ್ತೆಯಲ್ಲಿ ಒದ್ದಾಡುತ್ತಿತ್ತು. ಈ ವೇಳೆ ಕಾರಿನಲ್ಲಿ ಬಂದ ಯುವತಿ ಶ್ವಾನವನ್ನು ರಕ್ಷಿಸಲು ಮುಂದಾಗಿದ್ದರು. ಇದೇ ವೇಳೆ ಬೈಕ್ ನಲ್ಲಿ ಬಂದ ಕಾಮುಕನೊಬ್ಬ ಯುವತಿಗೆ ಬ್ಯಡ್ ಟಚ್ ಮಾಡಿ ಹೋಗಿದ್ದಾನೆ. ಯುವತಿ ಶ್ವಾನ ರಕ್ಷಿಸುವಷ್ಟರಲ್ಲಿ ಆಕೆಯ ಕೈಯೆಲ್ಲ ರಕ್ತವಾಗಿತ್ತು. ಯುವತಿ ಪ್ರೆಟ್ರೋಲ್ ಬಂಕ್ ಬಳಿ ಬಂದು ಕೈತೊಳೆದುಕೊಳ್ಳುತ್ತಿದ್ದಳು. ಈ ವೇಳೆ ಮತ್ತೆ ಬೈಕ್ ನಲ್ಲಿ ಬಂದ ಕಾಮುಕ ಯುವತಿ ಅಂಗಾಂಗ ಮುಟ್ಟಿ ಕಿರುಕುಳ ನೀಡಿ ಪರಾರಿಯಾಗಿದ್ದಾನೆ.

ಈ ಬಗ್ಗೆ ಯುವತಿ ಅಮೃತಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದರು. ಸದ್ಯ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್ ಬಂಧಿತ ಆರೋಪಿ.

Home add -Advt


Related Articles

Back to top button