Latest

ಕಾಸರಗೋಡು ಯುವತಿ ಮೇಲೆ ಅತ್ಯಾಚಾರ; ಇಸ್ಲಾಂ ಧರ್ಮಾಕ್ಕೆ ಮತಾಂತರವಾಗುವಂತೆ ಬ್ಲ್ಯಾಕ್ ಮೇಲ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕಾಸರಗೋಡು ಯುವತಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದೆ ಶೋಭಾ ಕರಂದ್ಲಾಜೆ ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ದೂರು ನೀಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಕಾಸರಗೋಡು ಮೂಲದ ಯುವತಿಯನ್ನು ಕೇರಳ ಮೂಲದ ಯುವಕರು ಬಲವಂತವಾಗಿ ಮದ್ಯ ಕುಡಿಸಿ, ಆಕೆಯನ್ನು ಹೋಟೆಲ್ ರೂಮಿಗೆ ಕರೆದೊಯ್ದು ಆತ್ಯಾಚಾರ ಮಾಡಿದ್ದಾರೆ. ಇದರ ವೀಡಿಯೋ ಮಾಡಿಟ್ಟಿಕೊಂಡಿರುವ ಯುವಕರು, ಆಕೆಗೆ ಬೆದರಿಕೆಯೊಡ್ಡುತ್ತಿದ್ದಾರೆ.

ನೀನು ಹಾಗೂ ನಿಮ್ಮ ಮನೆ ಹೆಣ್ಣುಮಕ್ಕಳು ಮುಸ್ಲೀಂ ಧರ್ಮಕ್ಕೆ ಮತಾಂತರಗೊಳ್ಳಬೇಕು. ನಿನ್ನ ತಂದೆಯನ್ನು ಬಿಟ್ಟು ಎಲ್ಲಾ ಹೆಣ್ಣು ಮಕ್ಕಳು ಇಸ್ಲಾಂ ಗೆ ಮತಾಂತರವಾಗಬೇಕು. ಮತಾಂತರಗೊಂಡರೆ ಮಾತ್ರ ತೊಂದರೆ ಕೊಡುವುದಿಲ್ಲ. ಇಲ್ಲವಾದಲ್ಲಿ ಈ ವಿಡೀಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಇದರಿಂದ ಕಂಗಾಲಾದ ಯುವತಿ ಹಾಗೂ ಆಕೆಯ ತಾಯಿ ತಮ್ಮ ಬಳಿಗೆ ಬಂದು ದು:ಖ ತೋಡಿಕೊಂಡಿದ್ದಾರೆ ಎಂದು ತಿಳಿಸಿದರು.

ಅಲ್ಲದೇ ಪ್ರಕರಣ ಸಂಬಂಧ ಯುವತಿ ಹಾಗೂ ಆಕೆ ಕುಟುಂಬಸ್ಥರು ಕಾಸರಗೋಡು ಪೊಲೀಸ್ ಠಾಗೆ ಹೋಗಿ ದೂರು ದಾಖಲಿಸಲು ಮುಂದಾದರೆ ಪೊಲೀಸರು ಸರಿಯಾಗಿ ಸ್ಪಂದಿಸಿಲ್ಲ. ಅಲ್ಲದೇ  ಯುವತಿ ಮೇಲೆ ಅತ್ಯಾಚಾರವೆಸಗಿ, ಬ್ಲ್ಯಾಕ್ ಮೇಲ್ ಮಾಡುತ್ತಿರುವ ಯುವಕರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ದೂರು ನಿಡಿದ್ದು, ಕೃತ್ಯದ ಹಿಂದಿನ ಜಾಲ ಬೇಧಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button