
ಪ್ರಗತಿವಾಹಿನಿ ಸುದ್ದಿ: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ನಡೆದಿದೆ.
ಚಿರತೆಗಳ ಕೇಜ್ ಸ್ವಚ್ಚ ಮಾಡಲೆಂದು ತೆರಳಿದ್ದ ಸಿಬ್ಬಂದಿಯ ಮೇಲೆ ಏಕಾಏಕಿ ಚಿರತೆ ದಾಳಿ ನಡೆಸಿದ್ದು, ಸಿಬ್ಬಂದಿಯ ಮುಖ, ಕತ್ತು, ಬೆನ್ನು ಹಾಗೂ ಕೈ ಭಾಗದಲ್ಲಿ ಗಂಭೀರವಾದ ಗಾಯಗಳಾಗಿವೆ.
ಶಾಂತಪ್ಪ ಚಿರತೆ ದಾಳಿಯಿಂದ ಗಾಯಗೊಂಡವರು. ಗಾಯಾಳು ಸಿಬ್ಬಂದಿಯನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಂದುನಿಂದ ಇಂದು ಬೆಳಿಗ್ಗೆ ಚಿರತೆ ಕೇಜ್ ಸ್ವಚ್ಚಗೊಳಿಸುವ ವೇಳೆ ಏಕಾಏಕಿ ದಾಳಿ ನಡೆಸಿದೆ.

